ಕರ್ನಾಟಕ

karnataka

By

Published : Nov 29, 2019, 6:45 PM IST

ETV Bharat / city

ನಿನಗೇ ಮತ ಹಾಕದವರು, ನೀನು ಹೇಳಿದವರಿಗೆ ವೋಟ್​ ಹಾಕ್ತಾರಾ ಅಣ್ಣಾ... ಬೇಗ್​ ಕಾಲೆಳೆದ ಡಿಕೆಶಿ

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ರೋಡ್ ಶೋ ನಡೆಸಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

D.k.Shivakumar election campaign in Bangalore
ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ರೋಡ್ ಶೋ

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಬಗ್ಗೆ ನಾನು ಮಾತನಾಡಲ್ಲ. ಅವರು, ನಮ್ಮ ಲೆವೆಲ್ ಅಲ್ಲವೆಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ನಡೆಸಿದ ರೋಡ್ ಶೋನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರಜಾಪ್ರಭುತ್ವವನ್ನು ತಲೆತಗ್ಗಿಸುವ ಕೆಲಸ ಮಾಡಿದೆ. ಉಪಚುನಾಣೆ ನಂತರ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ನಾವು ಇಳಿಸುವುದಿಲ್ಲ. ಅವರ ಕಡೆಯವರೇ ಇಳಿಸುತ್ತಾರೆ. ಅದಕ್ಕೆ ಟೈಮ್​​ ಹೇಳಲ್ಲ. ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಸಂತೆಯಲ್ಲಿ ಕುರಿ, ಕೋಳಿ ರೀತಿ ಶಾಸಕರನ್ನು ಖರೀದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ರೋಡ್ ಶೋ

ರೋಷನ್ ಬೇಗ್​​​ಗೆ ಟಿಕೆಟ್ ಕೊಟ್ಟರೆ ಮತ ಹಾಕಲ್ಲ ಎಂದು ಬಿಜೆಪಿ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಅದ್ರೂ ಬೇಗ್​​ ಬಿಜೆಪಿ ಪರ ಪ್ರಚಾರಕ್ಕೆ ಹೋಗ್ತಿದ್ದಾರೆ. ನಿನಗೆ ವೋಟ್ ಹಾಕದ ಜನ, ನೀನು ಹೇಳಿದವರಿಗೆ ವೋಟ್ ಹಾಕ್ತಾರಾ ರೋಷನ್ ಬೇಗ್ ಅಣ್ಣಾ ಎಂದು ಕಾಲೆಳೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಿಜ್ವಾನ್, ಶಿವಾಜಿನಗರದ ಮತದಾರರು ನನ್ನ ಮೇಲೆ ಒಲವು ತೋರಿದ್ದಾರೆ. ಅಲ್ಲದೆ ಡಿ.ಕೆ. ಶಿವಕುಮಾರ್ ಅವರು ನನಗೆ ಬೆಂಬಲ ಸೂಚಿಸಿದ್ದು, ಬಲ ಬಂದಂತಾಗಿದೆ. ಖಂಡಿತ ಗೆಲುವು ನನ್ನದೇ ಎಂದರು.

ಶಿವಾಜಿನಗರ ಕೈ ಕಾರ್ಯಕರ್ತರು ಡಿ ಕೆ ಶಿವಕುಮಾರ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಕ್ರೇನ್ ಮೂಲಕ ಬೃಹತ್ ಹೂವಿನಹಾರ ಹಾಕಿ, ಪಟಾಕಿ ಸಿಡಿಸಿದ್ರು. ರೋಡ್ ಶೋನಲ್ಲಿ ಜೇವರ್ಗಿ ಶಾಸಕ ಅಜಯ್ ಸಿಂಗ್ ಹಾಗೂ ಹಾಸ್ಯನಟ ಸಾಧು ಕೋಕಿಲ ಭಾಗವಹಿಸಿದ್ದರು.

ABOUT THE AUTHOR

...view details