ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಜಾಗದಲ್ಲಿ ಹೆರಿಟೇಜ್ ಅಂಡ್ ಎನ್ವೈರ್ನಮೆಂಟ್ ಟ್ರಸ್ಟ್ ಮಾಡುತ್ತಿರುವ ಕುರಿತು ವಿಸ್ತೃತ ಚರ್ಚೆ ನಡೆಸಲು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕಾಂತರಾಜ್, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಜಾಗ ಖಾಸಗಿಗೆ ಕೊಡಬಾರದು ಎಂದಿದ್ದರೂ ಟ್ರಸ್ಟ್ ಗೆ ಕೊಡಲಾಗಿದೆ. ಯಾರನ್ನು ಟ್ರಸ್ಟಿಗಳನ್ನಾಗಿ ಮಾಡುತ್ತೀರಾ? ಶ್ರೇಷ್ಠ ನಾಗರೀಕರನ್ನು ಟ್ರಸ್ಟಿಗಳನ್ನಾಗಿ ಮಾಡುವುದು ಎಂದರೆ ಯಾರು? ಅದಾನಿ, ಅಂಬಾನಿಯಾ? ಮುಂದೆ ಇದನ್ನು ಟ್ರಸ್ಟ್ನವರು ಮಾರಿಕೊಳ್ಳುತ್ತಾರೆ, ಹೆರಿಟೇಜ್ ಅಂಡ್ ಎನ್ವೈರ್ನಮೆಂಟ್ ಟ್ರಸ್ಟ್ ಯಾರದ್ದು? ಏನಿದು? ಎಂದು ಪ್ರಶ್ನಿಸಿದರು.
ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಿ
ಪ್ರತಿಪಕ್ಷ ನಾಯಕ ಎಸ್.ಆರ್ಪಾಟೀಲ್ ಮಾತನಾಡಿ, ಮೈಸೂರು ಮಹಾರಾಜರ ಕಾಲದ ಕಂಪನಿ, ಇದನ್ನ ಟ್ರಸ್ಟ್ಗೆ ಕೊಟ್ಟಿದ್ದಾರೆ, ಇದು ಸರ್ಕಾರದ ಟ್ರಸ್ಟ್ ಅಲ್ಲ, ಖಾಸಗಿ ವ್ಯಕ್ತಿಗಳ ಟ್ರಸ್ಟ್, ಖಾಸಗಿಯವರು ನಡೆಸದೇ ಇದ್ದರೆ ಅದು ಖಾಸಗಿಯವರ ಪಾಲಾಗಲಿದೆ. ಯಶವಂತಪುರ ಹೃದಯಭಾಗದಲ್ಲಿ 22.5 ಎಕರೆ ಜಾಗವಿದೆ. ಇದು ಕೇವಲ ಐದು ಜನರ ಪಾಲಾಗಲಿದೆ. ಅರ್ಧ ಗಂಟೆ ಚರ್ಚೆಗೆ ಮಾರ್ಪಡಿಸಬೇಕು ಎಂದು ಮನವಿ ಮಾಡಿದರು.
ಸಮಜಾಯಿಷಿ ನೀಡಿದ ಸಚಿವರು