ಬೆಂಗಳೂರು:ಸಿ. ಪಿ. ಯೋಗೇಶ್ವರ್ ನಮ್ಮ ಪಕ್ಷಕ್ಕೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಎದುರಿಸುತ್ತಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಪರ ಡಿಸಿಎಂ ಅಶ್ವತ್ಥ ನಾರಾಯಣ್ ಬೆಂಬಲಿತ ಮಾತು ಹೇಳಿದ್ದಾರೆ.
ಸಿ.ಪಿ.ಯೋಗೇಶ್ವರ್ ಪರ ಡಿಸಿಎಂ ಅಶ್ವತ್ಥ್ ನಾರಾಯಣ್ ಬ್ಯಾಟಿಂಗ್ - ಸಚಿವ ಸಂಪುಟ ವಿಸ್ತಣೆ ಕುರಿತು ಅಶ್ವತ್ಥ ನಾರಾಯಣ ಹೇಳಿಕೆ
ಸಿ. ಪಿ. ಯೋಗೇಶ್ವರ್ ಪ್ರಬಲ ನಾಯಕ, ಅವರಿಗೆ ಸಚಿವ ಸ್ಥಾನ ಕೊಡೋದು ಬೇಡ ಅನ್ನೋದು ಸರಿಯಲ್ಲ. ಅವರ ತ್ಯಾಗವನ್ನ ನಾವು ನೋಡಬೇಕಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸಿ. ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದುರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಡಿಸಿಎಂ ಅಶ್ವತ್ಥ್ ನಾರಾಯಣ್
ಸಿ. ಪಿ. ಯೋಗೇಶ್ವರ್ ಪ್ರಬಲ ನಾಯಕ. ಅವರಿಗೆ ಸಚಿವ ಸ್ಥಾನ ಕೊಡೋದು ಬೇಡ ಅನ್ನೋದು ಸರಿಯಲ್ಲ. ಅವರ ತ್ಯಾಗವನ್ನ ನಾವು ನೋಡಬೇಕಿದೆ. ಈ ಬಗ್ಗೆ ನಮ್ಮ ಸಿಎಂ ಬಿ. ಎಸ್. ಯಡಿಯೂರಪ್ಪನವರು ಕ್ರಮ ತೆಗದುಕೊಳ್ಳಲಿದ್ದಾರೆ. ಯಾರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಸಿ.ಪಿ.ಯೋಗೇಶ್ವರ್ ಪರ ಡಿಸಿಎಂ ಅಶ್ವತ್ಥ ನಾರಾಯಣ್ ಬ್ಯಾಟಿಂಗ್
ಸಿದ್ದಗಂಗಾ ಮಠ, ಶಾಲೆಗಳಿಗೆ ದಾಸೋಹ ಯೋಜನೆಯಡಿ ನೀಡುತ್ತಿದ್ದ ಅಕ್ಕಿ ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ವಿಚಾರ ನಂಗೆ ಗೊತ್ತಿಲ್ಲ. ಮಾಹಿತಿ ಪಡೆದು ಮಾತಾಡುತ್ತೇನೆ ಎಂದು ತಿಳಿಸಿದರು.
TAGGED:
ಸಚಿವ ಸಂಪುಟ ವಿಸ್ತಣೆ