ಕರ್ನಾಟಕ

karnataka

ETV Bharat / city

ಹವಾಲ ಪ್ರಕರಣ... ನಾಳೆ ಡಿಕೆಶಿ ಹಣೆಬರಹ ನಿರ್ಧರಿಸಲಿದೆ ಹೈಕೋರ್ಟ್​ - ಮಾಜಿ ಸಚಿವ ಡಿ. ಕೆ ಶಿವಕುಮಾರ್

ಮಾಜಿ ಸಚಿವ ಡಿ. ಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ  ಅಕ್ರಮ ಹಣ ಪ್ರಕರಣಕ್ಕೆ  ಸಂಬಂಧಿಸಿದಂತೆ ಇಡಿ ಜಾರಿಗೊಳಿಸಿದ ಸಮನ್ಸ್​ ಅನ್ನು ರದ್ದು ಪಡಿಸಬೇಕೆಂದು  ಕೋರಿ ಸಲ್ಲಿಸಿದ್ದ  ಅರ್ಜಿಯ ಕುರಿತು ನಾಳೆ ಹೈಕೋರ್ಟ್​ ಅಂತಿಮ ತೀರ್ಪು ಪ್ರಕಟ ಮಾಡಲಿದೆ.

ಡಿಕೆಶಿ ಹವಾಲಾ ಪ್ರಕರಣ

By

Published : Aug 28, 2019, 9:04 PM IST

ಬೆಂಗಳೂರು: ಮಾಜಿ ಸಚಿವ ಡಿ. ಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಜಾರಿಗೊಳಿಸಿದ ಸಮನ್ಸ್​ ಅನ್ನು ರದ್ದು ಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನಾಳೆ ಹೈಕೋರ್ಟ್​ ಅಂತಿಮ ತೀರ್ಪು ಪ್ರಕಟ ಮಾಡಲಿದೆ.

ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ತೀರ್ಪಿಗೆ ಸಂಬಂಧ ಪಟ್ಟಂತೆ ಉಕ್ತಲೇಖನ ನೀಡುತ್ತಿದ್ದು, ನಾಳೆ ತೀರ್ಪನ್ನ ಪ್ರಕಟಿಸುವುದಾಗಿ ನ್ಯಾಯಲಯ ತಿಳಿಸಿದೆ. ದೆಹಲಿಯ ಫ್ಲಾಟ್​ವೊಂದರಲ್ಲಿ 8.59 ಕೋಟಿ ರೂ. ಹಣ ಸಿಕ್ಕ ಬಗ್ಗೆ‌ ಇಡಿ ಸಮನ್ಸ್ ಜಾರಿ ಮಾಡಿದ್ದು, ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಇದನ್ನು ಪ್ರಶ್ನಿಸಿದ್ದರು. ಜೊತೆಗೆ ಪ್ರಸಿದ್ಧ ವಕೀಲ ಕಪಿಲ್ ಸಿಬಲ್ ಡಿಕೆಶಿ ಪರ ವಾದ ಮಂಡಿಸಿದ್ದರು.

ಈ ಪ್ರಕರಣದ ಕುರಿತು ಹೈಕೋರ್ಟ್ ನಾಳೆ ಅಂತಿಮ ತೀರ್ಪು ನೀಡುವ ಸಂಭವವಿದ್ದು, ಎಲ್ಲರಲ್ಲೂ ಕಾತುರ ಮನೆಮಾಡಿದೆ.

ABOUT THE AUTHOR

...view details