ಚಾಮರಾಜನಗರ: ಬಿಳಿಕಲ್ಲು ಕ್ರಷರ್ನ ಜಾಕ್ಪ್ಲೇಟ್ ದುರಸ್ತಿ ವೇಳೆ ಆಯತಪ್ಪಿ ಕೆಳಗೆ ಬಿದ್ದು ಒರ್ವ ಮೃತಪಟ್ಟು, ಮತ್ತೋರ್ವ ಕಾರ್ಮಿಕರನ ಕೈ ಮುರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗೇಟ್ ಬಳಿಯ ಕ್ರಿಸ್ಟಲ್ ಕ್ರಷರ್ನಲ್ಲಿ ನಡೆದಿದೆ.
ಕ್ರಷರ್ನಲ್ಲಿ ಆಯತಪ್ಪಿ ಬಿದ್ದು ಒಬ್ಬನ ಸಾವು, ಮತ್ತೋರ್ವನ ಕೈ ಮುರಿತ: ಮಾಲೀಕನ ವಿರುದ್ಧ ಎಫ್ಐಆರ್ - ಚಾಮರಾಜನಗರ ಕ್ರಿಸ್ಟಲ್ ಕ್ರಷರ್ ಕಾರ್ಮಿಕ ಸಾವು
ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗೇಟ್ ಬಳಿಯ ಕ್ರಿಸ್ಟಲ್ ಕ್ರಷರ್ನಲ್ಲಿ ಜಾಕ್ಪ್ಲೇಟ್ ದುರಸ್ತಿ ವೇಳೆ ಆಯತಪ್ಪಿ ಕೆಳಗೆ ಬಿದ್ದು ಒರ್ವ ಮೃತಪಟ್ಟು, ಮತ್ತೋರ್ವ ಕಾರ್ಮಿಕರನ ಕೈ ಮುರಿದ ಘಟನೆ ಜರುಗಿದೆ. ಕ್ರಷರ್ ಮಾಲೀಕನ ಮೇಲೆ ದೂರು ದಾಖಲಾಗಿದೆ.

ಕ್ರಿಸ್ಟಲ್ ಕ್ರಷರ್
ಕೇರಳ ರಾಜ್ಯದ ಪೆರಂಬೂರು ಮೂಲದ ವಿಪಿನ್ ರಾಜ್(36) ಮೃತ ಆಪರೇಟರ್. ಚಾಲಿ ಬಾಬು ಎಂಬಾತ ಕೈ ಮುರಿತಕ್ಕೊಳಗಾಗಿ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕ್ರಿಸ್ಟಲ್ ಕ್ರಷರ್ನ ಚಾಕ್ಫ್ಲೆಟ್ ಕೆಟ್ಟಿತ್ತು. ಆಗ ಆಪರೇಟರ್ ವಿಪಿನ್ ರಾಜ್ ದುರಸ್ತಿಗೆ ಪ್ರಯತ್ನ ನಡೆಸುವ ವೇಳೆ ಆಯತಪ್ಪಿ ಬಿದ್ದ ಕಾರಣ ವಿಪಿನ್ ರಾಜ್ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ.
ದೂರಿನ ಆಧಾರದ ಮೇಲೆ ಕ್ರಷರ್ ಮಾಲೀಕ ಪಿ.ಕೆ.ಅನ್ಸರ್, ಕ್ರಷರ್ ವ್ಯವಸ್ಥಾಪಕ ಗಫೂರ್ ಎಂಬವರ ಮೇಲೆ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.