ಕರ್ನಾಟಕ

karnataka

By

Published : Jul 30, 2020, 10:22 PM IST

ETV Bharat / city

ಡಿಕೆಶಿ ಕೋತ್ವಾಲ್ ರಾಮಚಂದ್ರ ಸಂಸ್ಕೃತಿಯಿಂದ ಆಚೆ ಬರಬೇಕು: ಸಿ.ಪಿ.ಯೋಗೇಶ್ವರ್ ತಿರುಗೇಟು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್,​​​ ಅವರು ಮೊದಲು ಕೋತ್ವಾಲ್​​ ರಾಮಚಂದ್ರ ಸಂಸ್ಕೃತಿಯಿಂದ ಹೊರಗೆ ಬರಬೇಕು. ಈ ತರಹದ ಹೇಳಿಕೆ‌ಗಳು ಅವರ ಸ್ಥಾನ, ಗೌರವಕ್ಕೆ ಚ್ಯುತಿ ತರುತ್ತಿವೆ ಎಂದು ಕಿಡಿ‌ ಕಾರಿದ್ದಾರೆ.

cp-yogeshwar-reaction-on-dk-shivakumar-statement
ಸಿಪಿ ಯೋಗೇಶ್ವರ

ಬೆಂಗಳೂರು: ಕೋತ್ವಾಲ್ ರಾಮಚಂದ್ರ ಸಂಸ್ಕೃತಿಯಿಂದ ಡಿಕೆಶಿ ಆಚೆ ಬರಬೇಕು ಎಂದು ಸಿ. ಪಿ. ಯೋಗೇಶ್ವರ್ ತಿರುಗೇಟು ನೀಡಿದ್ದಾರೆ. ನನ್ನ ವಿರುದ್ಧ ಅವರು ಗಾಳಿ ಸುದ್ದಿಗಳನ್ನು ಹರಿಬಿಡ್ತಿದ್ದಾರೆ. ಬಿಜೆಪಿಯಲ್ಲಿ ನಾನು ತತ್ವಾದರ್ಶಗಳನ್ನು ಇಟ್ಟುಕೊಂಡವನು. ಮೂರು ತಿಂಗಳ ಹಿಂದೆಯೇ ಬಿಎಸ್​ವೈ ಹಾಗೂ ಪಕ್ಷದ ವರಿಷ್ಠರು ನನಗೆ ಮೇಲ್ಮನೆ ಸದಸ್ಯ ಮಾಡ್ತೀವಿ ಅಂತ ಭರವಸೆ ನೀಡಿದ್ದರು ಎಂದು ಸ್ಪಷ್ಟಪಡಿಸಿದರು.

ಡಿಕೆಶಿಗೆ ಸಿ.ಪಿ.ಯೋಗೇಶ್ವರ ತಿರುಗೇಟು

ಡಿಕೆಶಿ ವಿಷಬೀಜ ಬಿತ್ತೋ ಕೆಲಸ ಮಾಡ್ತಿದ್ದಾರೆ. ನಾನು ಅವರ ಕಾಲಿಗೆ ಬೀಳೋ ಸಂದರ್ಭ ಯಾವತ್ತೂ ಬರಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಘನತೆ, ಗಾಂಭೀರ್ಯತೆಯಿಂದ ಮಾತನಾಡಬೇಕು. ಈ ತರಹದ ಹೇಳಿಕೆಗಳು ಅವರ ಸ್ಥಾನ, ಗೌರವಕ್ಕೆ ಚ್ಯುತಿ ತರುತ್ತಿದೆ ಎಂದು ಕಿಡಿ‌ ಕಾರಿದ್ದಾರೆ.

ಯಡಿಯೂರಪ್ಪ ಅವರು ಸಿಎಂ ಆಗುವುದಕ್ಕೆ ನನ್ನದೂ ಅಳಿಲು ಸೇವೆ ಇದೆ. ಬಿಎಸ್​​ವೈ ವಿರುದ್ಧ ಯಾವುದೇ ಸಂಚು ಅಥವಾ ಪಿತೂರಿ ಮಾಡುವ ಅವಶ್ಯಕತೆ ಇಲ್ಲ. ಅವರು ಮುಂದಿನ ಮೂರು ವರ್ಷ ಅಧಿಕಾರ ನಡೆಸಲಿದ್ದಾರೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details