ಬೆಂಗಳೂರು:ಬಿಬಿಎಂಪಿ ಮೇಯರ್-ಉಪ ಮೇಯರ್ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ಗೆ ಕೈ ಕೊಟ್ಟ ಲೆಕ್ಕಾಚಾರ ಹೊರಬಿದ್ದಿದೆ. ಕಡೇ ಗಳಿಗೆಯಲ್ಲಿ ಹಲವರು ಆಮಿಷಗಳನ್ನ ತೋರಿದ್ರು ಎನ್ನಲಾಗಿದೆ. ಮತ ಚಲಾಯಿಸುವ ವೇಳೆ ಹಾಜರಿದ್ದರೂ ಮತ ಹಾಕದೆ ಕೊನೆ ಗಳಿಗೆಯಲ್ಲಿ ಗೇಮ್ ಬದಲಾಯಿಸಲಾಗಿದೆ ಎನ್ನಲಾಗಿದೆ. ಮೈತ್ರಿ ಮುಂದುವರಿಸುತ್ತೇವೆ ಎಂದು ಹೇಳಿಯೂ ಕಾಂಗ್ರೆಸ್ಗೆ ಜೆಡಿಎಸ್ನ ಕೆಲ ನಾಯಕರು ಕೈಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ವಿಧಾನಸಭೆ ಸದಸ್ಯರಾದ ಶರವಣ, ಸಿ.ಆರ್.ಮನೋಹರ್, ರಮೇಶ್ಗೌಡ, ಮಾಜಿ ಉಪ ಮೇಯರ್ ಆನಂದ್, ಪದ್ಮಾವತಿ, ಗಂಗಮ್ಮ, ದೇವದಾಸ್ ಹಾಗೂ ಮಂಜುಳಾ ನಾರಾಯಣಸ್ವಾಮಿ ಕೈ ಕೊಟ್ಟರೆ, ಉಪ ಮೇಯರ್ ಮತದಾನದ ವೇಳೆ ಮಹಾದೇವ್, ಹೇಮಲತಾ, ದೇವದಾಸ್ ಹಾಗೂ ಮಂಜುಳಾ ನಾರಾಯಣಸ್ವಾಮಿ ಮತ ಹಾಕದೆ ತಟಸ್ಥರಾದರು. ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಜೆಡಿಎಸ್ ನೆರವಾಯಿತು. ಮತದಾನ ಆರಂಭಕ್ಕೂ ಮುನ್ನ ಜೆಡಿಎಸ್ ಮುಖಂಡರ ಬಳಿ ಮಾತನಾಡಿ, ಕಡೆ ಗಳಿಗೆಯಲ್ಲಿ ಹಲವರು ಆಮಿಷಗಳನ್ನ ತೋರಿಸಿದ್ದರೂ ಎನ್ನಲಾಗಿದೆ.