ಕರ್ನಾಟಕ

karnataka

ETV Bharat / city

ಬಿಬಿಎಂಪಿ ಮೇಯರ್​​​​ ಚುನಾವಣೆಗೆ ಗೈರಾದವರು ಯಾರ್ಯಾರು ಗೊತ್ತಾ? - ಮೇಯರ್ ಚುನಾವಣೆಗೆ ಗೈರು

ಬಿಬಿಎಂಪಿ ಮೇಯರ್-ಉಪ ಮೇಯರ್ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್​ಗೆ ಕೈ ಕೊಟ್ಟ ಲೆಕ್ಕಾಚಾರ ಹೊರಬಿದ್ದಿದೆ. ಕಡೇ ಗಳಿಗೆಯಲ್ಲಿ ಹಲವರು ಆಮಿಷಗಳನ್ನ ತೋರಿದ್ರು ಎನ್ನಲಾಗಿದೆ.

corporate-rs-absent-for-mayoral-election

By

Published : Oct 1, 2019, 11:43 PM IST

ಬೆಂಗಳೂರು:ಬಿಬಿಎಂಪಿ ಮೇಯರ್-ಉಪ ಮೇಯರ್ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್​ಗೆ ಕೈ ಕೊಟ್ಟ ಲೆಕ್ಕಾಚಾರ ಹೊರಬಿದ್ದಿದೆ. ಕಡೇ ಗಳಿಗೆಯಲ್ಲಿ ಹಲವರು ಆಮಿಷಗಳನ್ನ ತೋರಿದ್ರು ಎನ್ನಲಾಗಿದೆ. ಮತ ಚಲಾಯಿಸುವ ವೇಳೆ ಹಾಜರಿದ್ದರೂ ಮತ ಹಾಕದೆ ಕೊನೆ ಗಳಿಗೆಯಲ್ಲಿ ಗೇಮ್ ಬದಲಾಯಿಸಲಾಗಿದೆ ಎನ್ನಲಾಗಿದೆ. ಮೈತ್ರಿ ಮುಂದುವರಿಸುತ್ತೇವೆ ಎಂದು ಹೇಳಿಯೂ ಕಾಂಗ್ರೆಸ್​ಗೆ ಜೆಡಿಎಸ್​​ನ​ ಕೆಲ ನಾಯಕರು ಕೈಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ವಿಧಾನಸಭೆ ಸದಸ್ಯರಾದ ಶರವಣ, ಸಿ.ಆರ್.ಮನೋಹರ್, ರಮೇಶ್​ಗೌಡ, ಮಾಜಿ ಉಪ ಮೇಯರ್ ಆನಂದ್, ಪದ್ಮಾವತಿ, ಗಂಗಮ್ಮ, ದೇವದಾಸ್ ಹಾಗೂ ಮಂಜುಳಾ ನಾರಾಯಣಸ್ವಾಮಿ ಕೈ ಕೊಟ್ಟರೆ, ಉಪ ಮೇಯರ್ ಮತದಾನದ ವೇಳೆ ಮಹಾದೇವ್, ಹೇಮಲತಾ, ದೇವದಾಸ್ ಹಾಗೂ ಮಂಜುಳಾ ನಾರಾಯಣಸ್ವಾಮಿ ಮತ ಹಾಕದೆ ತಟಸ್ಥರಾದರು. ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಜೆಡಿಎಸ್ ನೆರವಾಯಿತು. ಮತದಾನ ಆರಂಭಕ್ಕೂ ಮುನ್ನ ಜೆಡಿಎಸ್ ಮುಖಂಡರ ಬಳಿ ಮಾತನಾಡಿ, ಕಡೆ ಗಳಿಗೆಯಲ್ಲಿ ಹಲವರು ಆಮಿಷಗಳನ್ನ ತೋರಿಸಿದ್ದರೂ ಎನ್ನಲಾಗಿದೆ.

ಮೇಯರ್ ಚುನಾವಣೆಯಲ್ಲಿ ಒಟ್ಟು 257ರಲ್ಲಿ ಮತದಾರರಲ್ಲಿ 8 ಮಂದಿ ಗೈರಾಗಿದ್ದರು. ಉಳಿದ 249ರಲ್ಲಿ ಜೆಡಿಎಸ್​ನ ಪಾಲಿಕೆ ಸದಸ್ಯರಾದ ಮಂಜುಳ ನಾರಾಯಣಸ್ವಾಮಿ, ದೇವದಾಸ್ ಹೊರ ನಡೆದರು. ಉಳಿದ 247ರಲ್ಲಿ 129 ಮಂದಿ ಬಿಜೆಪಿ ಪರ ಮತ ಚಲಾಯಿಸಿದರು. ಮೈತ್ರಿ ಅಭ್ಯರ್ಥಿಗೆ 118 ಮತ ಬರಬೇಕಿತ್ತು. ಆದರೆ, ಮತ್ತೆ ಆರು ಜನ ಕೈ ಕೊಟ್ಟಿದ್ದರಿಂದ ಕಾಂಗ್ರೆಸ್​​​ ಅಭ್ಯರ್ಥಿಗೆ ಕೇವಲ 112 ಮತ ಚಲಾವಣೆಗೊಂಡವು.

ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಪಕ್ಷದ ಮುಖಂಡರೂ ಗೈರಾಗಿದ್ದರು. ಬಿಜೆಪಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ದೋಸ್ತಿ ಪಡೆಯಿಂದ ಡಿ.ಕೆ.ಸುರೇಶ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿ, ರಘು ಆಚಾರ್, ಜೆಡಿಎಸ್ ಶಾಸಕ ಮಂಜುನಾಥ್, ಕೆ.ವಿ.ನಾರಾಯಣಸ್ವಾಮಿ ಗೈರಾಗಿದ್ದರು.

ABOUT THE AUTHOR

...view details