ಕರ್ನಾಟಕ

karnataka

ETV Bharat / city

ಯುವತಿಯ ನೈತಿಕ ಬೆಂಬಲಕ್ಕೆ ನ್ಯಾಯಾಲಯದ ಬಳಿ ನಲಪಾಡ್ ಆಗಮನ - Magistrates Court

ಸಿಡಿ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರದು ತಪ್ಪಿಲ್ಲ. ಯುವತಿ ಪೋಷಕರ ಹೇಳಿಕೆ ಹಿಂದೆ ರಮೇಶ್ ಜಾರಕಿಹೊಳಿ ಕೈವಾಡವಿದೆ. ತಪ್ಪು ಮಾಡಿದಾಗ ನಾನೇ ಮಾಡಿದ್ದು ಅಂತ ಯಾರೂ ಹೇಳಲ್ಲ..

Congress leader Mahmoud Nalapad
ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ನಲಪಾಡ್ ಹ್ಯಾರಿಸ್

By

Published : Mar 30, 2021, 5:09 PM IST

ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲಸಿಡಿ ಪ್ರಕರಣ ಸಂಬಂಧ ಯುವತಿ ಕೊನೆಗೂ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ‌ ಮುಂದೆ ಹಾಜರಾಗಿದ್ದಾರೆ. ಯುವತಿಯ ನೈತಿಕ ಬೆಂಬಲಕ್ಕೆ ಮೊಹಮ್ಮದ್ ನಲಪಾಡ್ ಹ್ಯಾರಿಸ್ ನ್ಯಾಯಾಲಯದ ಬಳಿ​ ಬಂದಿದ್ದಾರೆ.

ಯುವತಿಯ ನೈತಿಕ ಬೆಂಬಲಕ್ಕೆ ನ್ಯಾಯಾಲಯದ ಬಳಿ ನಲಪಾಡ್ ಆಗಮನ

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಸಂತ್ರಸ್ತೆಗೆ ನೈತಿಕ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇವೆ ಎಂದರು. ಇನ್ನು, ಸಿಡಿ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರದು ತಪ್ಪಿಲ್ಲ. ಯುವತಿ ಪೋಷಕರ ಹೇಳಿಕೆ ಹಿಂದೆ ರಮೇಶ್ ಜಾರಕಿಹೊಳಿ ಕೈವಾಡವಿದೆ. ತಪ್ಪು ಮಾಡಿದಾಗ ನಾನೇ ಮಾಡಿದ್ದು ಅಂತ ಯಾರೂ ಹೇಳಲ್ಲ ಎಂದರು.

ಮೊಹಮ್ಮದ್ ನಲಪಾಡ್ ಹ್ಯಾರಿಸ್ ಜೊತೆ ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

ಓದಿ: ಕೊನೆಗೂ ಮೌನ ಮುರಿದ ಸಿಎಂ: ಸಿಡಿ ಪ್ರಕರಣ ಬಗ್ಗೆ ಬಿಎಸ್​ವೈ ಹೇಳಿದ್ದೇನು?

ABOUT THE AUTHOR

...view details