ಬೆಂಗಳೂರು:ನಟ ಸುದೀಪ್ ಹೇಳಿಕೆಯಿಂದ ಒನ್ನೇಷನ್ ಹೆಸರಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ಬಿಂಬಿಸಲು ಹೊರಟಿರುವ ಆರ್ಎಸ್ಎಸ್, ಬಿಜೆಪಿಗೆ ತುರಿಕೆ ರೋಗ ತರಿಸಬಹುದು. ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದಿರುವ ಸುದೀಪ್ ಹೇಳಿಕೆ ಒಬ್ಬ ಕನ್ನಡಿಗನ ನಿಜವಾದ ಗತ್ತು ತೋರಿಸಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಟ ಸುದೀಪ್ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದಿರುವ ಹೇಳಿಕೆ ಒಬ್ಬ ಕನ್ನಡಿಗನ ನಿಜವಾದ ಅಂತಸತ್ವವನ್ನು ತೋರಿಸಿದೆ. ಸುದೀಪ್ ಮಾತು ಸತ್ಯ. ಹಿಂದಿ ರಾಷ್ಟ್ರೀಯ ಭಾಷೆಯಾಗಲು ಎಂದಿಗೂ ಸಾಧ್ಯವಿಲ್ಲ. ಕನ್ನಡಿಗರು ಹಿಂದಿಯನ್ನು ಒಂದು ಭಾಷೆಯಾಗಿ ಗೌರವಿಸುತ್ತೇವೆ ಎಂದಿದ್ದಾರೆ.