ಬೆಂಗಳೂರು:ಅನರ್ಹರನ್ನು ಗೆಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಪಣ ತೊಟ್ಟಿದ್ದು, ಇಂದು ಬೆಂಗಳೂರು ಹಾಗೂ ಹೊಸಕೋಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಅನರ್ಹರನ್ನ ಗೆಲ್ಲಿಸಲು ಪಣತೊಟ್ಟ ಬಿಎಸ್ವೈ.. ಇಂದು ಬೆಂಗಳೂರು, ಹೊಸಕೋಟೆಯಲ್ಲಿ ಭರ್ಜರಿ ರೋಡ್ ಶೋ - bangalore by poll
ಅನರ್ಹರನ್ನು ಗೆಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಪಣ ತೊಟ್ಟಿದ್ದು, ಇಂದು ಬೆಂಗಳೂರು ಹಾಗೂ ಹೊಸಕೋಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
![ಅನರ್ಹರನ್ನ ಗೆಲ್ಲಿಸಲು ಪಣತೊಟ್ಟ ಬಿಎಸ್ವೈ.. ಇಂದು ಬೆಂಗಳೂರು, ಹೊಸಕೋಟೆಯಲ್ಲಿ ಭರ್ಜರಿ ರೋಡ್ ಶೋ cm b.s.yadiyurappa roadshow in Bangalore and hosakote](https://etvbharatimages.akamaized.net/etvbharat/prod-images/768-512-5190257-thumbnail-3x2-sow.jpg)
ಸಿಎಂ ಬಿ.ಎಸ್.ಯಡಿಯೂರಪ್ಪ
ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಪರ ಬಿಎಸ್ವೈ ಮತಯಾಚನೆ ಮಾಡಲಿದ್ದಾರೆ. ಕಳೆದ ವಾರವಷ್ಟೇ ಎಂಟಿಬಿ ನಾಪಪತ್ರ ಸಲ್ಲಿಕೆಗೆ ಬಂದಿದ್ದ ಬಿಎಸ್ವೈ ಇಂದು ಎಂಟಿಬಿ ಪರ ಮತ್ತೊಮ್ಮೆ ಪ್ರಚಾರ ನಡೆಸಿ, ಮತಯಾಚನೆ ಮಾಡಲಿದ್ದಾರೆ. ಇದಲ್ಲದೇ ಮತ್ತೆರಡು ಬಾರಿ ಪ್ರಚಾರ ಕೈಗೊಂಡು ರೋಡ್ ಶೋ, ಸಮಾವೇಶ ಮೂಲಕ ಪ್ರಚಾರ ನಡೆಸಲಿದ್ದಾರೆ.
ಇನ್ನು, ಮಹಾಲಕ್ಷ್ಮಿ ಲೇಔಟ್ನಲ್ಲಿ ಗೋಪಾಲಯ್ಯ ಪರ ಹಾಗೂ ಕೆ.ಆರ್.ಪುರಂನಲ್ಲಿ ಭೈರತಿ ಬಸವರಾಜ್ ಪರ ರೋಡ್ ಶೋ ಮೂಲಕ ಸಿಎಂ ಪ್ರಚಾರ ನಡೆಸಲಿದ್ದಾರೆ.