ಕರ್ನಾಟಕ

karnataka

ETV Bharat / city

ಸಿಎಂ-ಯತ್ನಾಳ್ ಅಪರೂಪದ ಮುಖಾಮುಖಿ: ಇಬ್ಬರ ಮಧ್ಯೆ ನಡೆದ ಮಾತುಕತೆ ಏನು? - basavagowda patil meets yeddyurappa

ಸಿಎಂ ಯಡಿಯೂರಪ್ಪ ಮತ್ತು ಶಾಸಕ ಬಸನಗೌಡ ಯತ್ನಾಳ್ ಇಂದು ಮುಖಾಮುಖಿಯಾದರು. ಈ ವೇಳೆ ಯತ್ನಾಳ್ ಅವರ ಬೆನ್ನು ತಟ್ಟಿ ಮೀಸಲಾತಿ ಕುರಿತು ಮತ್ತು ಏನು ಬೇಕೋ ಅದರ ಬಗ್ಗೆ ಮಾತನಾಡೋಣ ಎಂದು ಭರವಸೆ ನೀಡಿದರು.

ಸಿಎಂ ಯಡಿಯೂರಪ್ಪ ಮತ್ತು ಶಾಸಕ ಬಸನಗೌಡ ಯತ್ನಾಳ್ ಇಂದು ಮುಖಾಮುಖಿ
ಸಿಎಂ ಯಡಿಯೂರಪ್ಪ ಮತ್ತು ಶಾಸಕ ಬಸನಗೌಡ ಯತ್ನಾಳ್ ಇಂದು ಮುಖಾಮುಖಿ

By

Published : Mar 9, 2021, 4:05 PM IST

Updated : Mar 9, 2021, 4:27 PM IST

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೆಂಡಕಾರುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಇಂದು ಮೊದಲ ಬಾರಿಗೆ ಸಿಎಂಗೆ ಮುಖಾಮುಖಿಯಾದ ಅಪರೂಪದ ಘಟನೆ ವಿಧಾನಸೌಧದಲ್ಲಿ ನಡೆಯಿತು.

ವಿಧಾನಸಭೆ ಕಲಾಪ ಮುಂದೂಡುತ್ತಲೇ ಯಡಿಯೂರಪ್ಪ - ಯತ್ನಾಳ್ ಮುಖಾಮುಖಿಯಾದರು. ವಿಧಾನಸೌಧದ ಪಶ್ಚಿಮ ದ್ವಾರದ ಬಳಿಯ ಮೊಗಸಾಲೆಯಲ್ಲಿ ಸಚಿವ ಸಿ.ಸಿ. ಪಾಟೀಲ್ ಜೊತೆ ಯತ್ನಾಳ್ ಮಾತುಕತೆ‌ ನಡೆಸುತ್ತಿದ್ದರು. ಈ ವೇಳೆ ಸಿಎಂ ಅಚಾನಕ್ಕಾಗಿ ಆಗಮಿಸಿ, ಯತ್ನಾಳ್ ಅವರ ಬೆನ್ನು ತಟ್ಟಿ ಮಾತಾಡಿಸಿದರು.

ಸಿಎಂ ಯಡಿಯೂರಪ್ಪ ಮತ್ತು ಶಾಸಕ ಬಸನಗೌಡ ಯತ್ನಾಳ್ ಇಂದು ಮುಖಾಮುಖಿ

ನಾನು ನೀನು ಕುಳಿತು ಮಾತಾಡೋಣ. ಪಂಚಮಸಾಲಿ ಮೀಸಲಾತಿ ಕುರಿತು ಮತ್ತು ಏನು ಬೇಕೋ ಅದರ ಬಗ್ಗೆ ಮಾತಾಡೋಣ ಎಂದು ಯತ್ನಾಳ್​ಗೆ ಸಿಎಂ ಭರವಸೆ ನೀಡಿದರು. ಈ ವೇಳೆ ಯತ್ನಾಳ್ ಆಯ್ತು ಬಿಡಿ ಸರ್. ನಮ್ಮ ಬೇಡಿಕೆ ಈಡೇರಿಸಿ ಸರ್ ಎಂದು ಮನವಿ ಮಾಡಿದರು. ಈ ವೇಳೆ ತಲೆ ಅಲ್ಲಾಡಿಸಿ ಅಲ್ಲಿಂದ ಹೊರಟು ಹೋದರು.

Last Updated : Mar 9, 2021, 4:27 PM IST

ABOUT THE AUTHOR

...view details