ಕರ್ನಾಟಕ

karnataka

ETV Bharat / city

ಖಾಸಗಿ ಆಸ್ಪತ್ರೆ, ಲ್ಯಾಬ್​ಗಳಿಗೆ ಕೊರೊನಾ ಬಾಕಿ ಶುಲ್ಕ ಬಿಡುಗಡೆಗೆ ಸಿಎಂ ಬೊಮ್ಮಾಯಿ ಸೂಚನೆ - ಖಾಸಗಿ ಆಸ್ಪತ್ರೆ, ಲ್ಯಾಬ್​ಗಳ ಕೊರೊನಾ ಬಾಕಿ

ಕೊರೊನಾ 2ನೇ ಅಲೆ ನಂತರ ಖಾಸಗಿ ಆಸ್ಪತ್ರೆ, ಲ್ಯಾಬ್​ಗಳು, ಕೊರೊನಾ ನಿರ್ವಹಣೆಗೆ ಉಳಿಸಿಕೊಂಡಿದ್ದ ಎಲ್ಲ ಬಾಕಿ ಪಾವತಿಗೆ ಸೂಚಿಸಲಾಗಿದೆ. ಮಾರ್ಚ್ ತಿಂಗಳವರೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳಿಗೂ ಅಗತ್ಯ ಹಣ ಬಿಡುಗಡೆಗೆ ಸೂಚಿಸಲಾಗಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ..

cm basavaraj bommai
ಸಿಎಂ ಬಸವರಾಜ್​ ಬೊಮ್ಮಾಯಿ

By

Published : Dec 8, 2021, 4:25 PM IST

ಬೆಂಗಳೂರು :ಕೊರೊನಾ 2ನೇ ಅಲೆ ನಂತರ ಖಾಸಗಿ ಆಸ್ಪತ್ರೆ, ಲ್ಯಾಬ್​ಗಳು, ಕೊರೊನಾ ನಿರ್ವಹಣೆಗೆ ಉಳಿಸಿಕೊಂಡಿದ್ದ ಎಲ್ಲ ಬಾಕಿ ಪಾವತಿಗೆ ಸೂಚಿಸಲಾಗಿದೆ. ಮಾರ್ಚ್ ತಿಂಗಳವರೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳಿಗೂ ಅಗತ್ಯ ಹಣ ಬಿಡುಗಡೆಗೆ ಸೂಚಿಸಲಾಗಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಕಡಿಮೆಯಾದ ನಂತರ ಯಾವ ಸ್ಥಿತಿಯಿದೆ. ನವೆಂಬರ್ ತಿಂಗಳಿನಲ್ಲಿ ಏನೆಲ್ಲಾ ಆಗಿದೆ. ಕ್ಲಸ್ಟರ್​ಗಳ ಸೃಷ್ಟಿಗೆ ಕಾರಣವೇನು? ಎಷ್ಟು ಜಿಲ್ಲೆಗಳಲ್ಲಿ ಕ್ಲಸ್ಟರ್ ಬಂದಿದೆ. ಅವುಗಳ ನಿರ್ವಹಣೆ ಯಾವ ರೀತಿ ಇದೆ ಎಂಬುದನ್ನು ಚರ್ಚಿಸಲಾಗುವುದು ಎಂದರು.

ಅಲ್ಲದೇ, ಹೊಸ ಪ್ರಬೇಧ ಒಮಿಕ್ರಾನ್ ಬಂದ ನಂತರ ಅದರ ಪರಿಣಾಮ ಏನಾಗಿದೆ? ಅವರ ಸಂಪರ್ಕಿತರ ವಿವರಗಳ ಜೊತೆಗೆ ಬೇರೆ ಬೇರೆ ದೇಶದಲ್ಲಿ ಹೊಸ ತಳಿ ಒಮಿಕ್ರಾನ್ ಬಗ್ಗೆ ಪ್ರೋಟೋಕಾಲ್ ಏನಿದೆ? ಚಿಕಿತ್ಸೆ ಯಾವ ರೀತಿ ಇದೆ. ನಾವು ಎಲ್ಲ ಸಿದ್ಧತೆ ಯಾವ ರೀತಿ ಮಾಡಿಕೊಳ್ಳಬೇಕು ಎಂದು ಸಂಪೂರ್ಣವಾದ ವಿವರವನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ನಾಳೆ ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಿ ಕೆಲ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ಕಳೆದ ಬಾರಿ ಕೊರೊನಾ ನಿರ್ವಹಣೆಯಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಮತ್ತು ಅದರಲ್ಲಿ ವಿಶೇಷವಾಗಿ ಆಮ್ಲಜನಕ ಘಟಕ ಎಷ್ಟು ಹಾಕಬೇಕಾಗಿತ್ತು. ಎಷ್ಟು ಹಾಕಲಾಗಿದೆ. ಈಗಾಗಲೇ ಅಳವಡಿಸಿರುವ ಘಟಕಕ್ಕೆ ಎಷ್ಟು ಹಣ ಬಾಕಿ ಕೊಡಬೇಕಿದೆ.

ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಎಷ್ಟು ಹಣ ಕೊಡಲಾಗಿದೆ. ಇನ್ನೂ ಎಷ್ಟು ಬಾಕಿ ಇದೆ ಎಂದು ಹಣಕಾಸು ಸ್ಥಿತಿಗತಿ ಕುರಿತು ಎರಡು ವಿಭಾಗದಲ್ಲಿ ಚರ್ಚೆ ಮಾಡಲಾಗಿದೆ. ಬಾಕಿ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ದುರಂತ: ಈ ದುರಂತ ನಮಗೆಲ್ಲಾ ದಿಗ್ಬ್ರಮೆ ಮೂಡಿಸಿದೆ.. ಸಿಎಂ

ಕೋವಿಡ್ ಬಗ್ಗೆ ಮುಂದೆ ಯಾವ ರೀತಿ ಎಚ್ಚರಿಕೆ ತೆಗೆದುಕೊಳ್ಳಬೇಕು, ಮಾರ್ಚ್ ವರೆಗೂ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎನ್ನುವ ಕುರಿತು ಹಣಕಾಸು ವ್ಯವಸ್ಥೆಗಳ ಕುರಿತು ಚರ್ಚೆ ಮಾಡಿದ್ದೇವೆ. ತಜ್ಞರನ್ನು ಆಹ್ವಾನಿಸಿ ಅವರ ಸಲಹೆ ಪಡೆದುಕೊಂಡು ನಂತರ ಸಂಪುಟದಲ್ಲಿ ಎಸ್ಒಪಿ ಮಾರ್ಪಾಡು ಇತ್ಯಾದಿ ಕ್ರಮಗಳ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ABOUT THE AUTHOR

...view details