ಬೆಂಗಳೂರು :ಕರ್ನಾಟಕಕ್ಕೆ ನಾಳೆ ಎರಡು ಪ್ರತ್ಯೇಕ ಕಂತುಗಳಲ್ಲಿ ಒಟ್ಟು 15,25,500 ಡೋಸ್ ಕೊರೊನಾ ಲಸಿಕೆ ರವಾನೆಯಾಗಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟೀಟ್ವ್ ಮೂಲಕ ತಿಳಿಸಿದ್ದಾರೆ.
ರಾಜ್ಯಕ್ಕೆ ಪ್ರತ್ಯೇಕ ಕಂತಿನಲ್ಲಿ ನಾಳೆ ಕೇಂದ್ರದಿಂದ ಕೊರೊನಾ ಲಸಿಕೆ ರವಾನೆ : ಸಚಿವ ಡಾ. ಸುಧಾಕರ್ - ಕೇಂದ್ರದಿಂದ ರಾಜ್ಯಕ್ಕೆ ಕೋವಿಡ್ ಲಸಿಕೆ ರವಾನೆ
ಸದ್ಯ ರಾಜ್ಯ ಸರ್ಕಾರದ ಬಳಿ 7 ಲಕ್ಷ ಲಸಿಕೆಗಳಷ್ಟು ದಾಸ್ತಾನಿದೆ. ನಿನ್ನೆ 2.5 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ ಲಸಿಕೆಯ ಕೊರತೆ ಇಲ್ಲ, ಆದರೂ ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರವು ಲಸಿಕೆಗಳನ್ನು ತುರ್ತಾಗಿ ಪೂರೈಕೆ ಮಾಡ್ತಿದೆ..
![ರಾಜ್ಯಕ್ಕೆ ಪ್ರತ್ಯೇಕ ಕಂತಿನಲ್ಲಿ ನಾಳೆ ಕೇಂದ್ರದಿಂದ ಕೊರೊನಾ ಲಸಿಕೆ ರವಾನೆ : ಸಚಿವ ಡಾ. ಸುಧಾಕರ್ central-government-giving-1525-500-dose-corona-vaccine-for-karnataka](https://etvbharatimages.akamaized.net/etvbharat/prod-images/768-512-11278558-thumbnail-3x2-sudhakar.jpg)
ಸಚಿವ ಸುಧಾಕರ್
ಒಂದು ಕಂತಿನಲ್ಲಿ ರಸ್ತೆ ಮೂಲಕ 5,25,500 ಡೋಸ್ ಲಸಿಕೆ ಬೆಳಗಾವಿಗೆ ತಲುಪಲಿದೆ. ಮತ್ತೊಂದು ಕಂತಿನಲ್ಲಿ 10,00,000 ಡೋಸ್ ಲಸಿಕೆ ವಿಮಾನದ ಮೂಲಕ ನಾಳೆ ಸಂಜೆ ಬೆಂಗಳೂರು ತಲುಪಲಿದೆ.
ಸದ್ಯ ರಾಜ್ಯ ಸರ್ಕಾರದ ಬಳಿ 7 ಲಕ್ಷ ಲಸಿಕೆಗಳಷ್ಟು ದಾಸ್ತಾನಿದೆ. ನಿನ್ನೆ 2.5 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ ಲಸಿಕೆಯ ಕೊರತೆ ಇಲ್ಲ, ಆದರೂ ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರವು ಲಸಿಕೆಗಳನ್ನು ತುರ್ತಾಗಿ ಪೂರೈಕೆ ಮಾಡ್ತಿದೆ.