ಕರ್ನಾಟಕ

karnataka

ETV Bharat / city

ಐಎಂಎ ತನಿಖೆ ಚುರುಕುಗೊಳಿಸಿದ ಸಿಬಿಐನ ಮಲ್ಟಿ ಡಿಸಿಪ್ಲಿನೆರಿ ಇನ್​ವೆಸ್ಟಿಗೇಷನ್​ ಟೀಮ್! ಯಾರಿಗೆಲ್ಲ ಚಳಿ? - ಬೆಂಗಳೂರು ಸುದ್ದಿ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಲಂಚ ಪಡೆದಿರುವುದು ಬಯಲಾಗಿರುವ ಕಾರಣ 12 ಜನ ಚಾಣಾಕ್ಷ ಅಧಿಕಾರಿಗಳನ್ನೊಳಗೊಂಡ ಸಿಬಿಐ ಮಲ್ಟಿ ಡಿಸಿಪ್ಲಿನೆರಿ ಇನ್​ವೆಸ್ಟಿಗೇಷನ್​ ಟೀಮ್ ತನಿಖೆಯನ್ನ ಚುರುಕುಗೊಳಿಸಿದೆ.

ಐಎಂಎ ತನಿಖೆ ಚುರುಕುಗೊಳಿಸಿದ ಸಿಬಿಐ ಮಲ್ಟಿ ಡಿಸಿಪ್ಲಿನೆರಿ ಇನ್​ವೆಸ್ಟಿಗೇಷನ್​ ಟೀಮ್

By

Published : Sep 12, 2019, 12:59 PM IST

ಬೆಂಗಳೂರು:ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಲಂಚ ಪಡೆದಿರುವುದು ಬಯಲಾಗಿರುವ ಕಾರಣ 12 ಜನ ಚಾಣಾಕ್ಷ ಅಧಿಕಾರಿಗಳನ್ನೊಳಗೊಂಡ ಸಿಬಿಐ ಮಲ್ಟಿ ಡಿಸಿಪ್ಲಿನೆರಿ ಇನ್​ವೆಸ್ಟಿಗೇಷನ್​ ಟೀಮ್ ತನಿಖೆಯನ್ನ ಚುರುಕುಗೊಳಿಸಿದೆ.

ಈ ಟೀಂನಲ್ಲಿ ಚಾರ್ಟರ್ಡ್ ಅಕೌಂಟೆಂಟ್, ವಿಧಿವಿಜ್ಞಾನ ಲೆಕ್ಕ ಪರಿಶೋಧಕರು,‌ ಕಂಪ್ಯೂಟರ್ ವಿಧಿವಿಜ್ಞಾನ ತಜ್ಞರು ಹಾಗೂ ಬ್ಯಾಂಕಿಂಗ್​ಗೆ ಸಂಬಂಧಿಸಿದ ಅಧಿಕಾರಿಗಳು ಭಾಗಿಯಾಗಿದ್ದು, ಐಎಂಎ ಕಂಪನಿಯ ಇಂಚಿಂಚು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್​ನಿಂದ ಹಲವಾರು ಮಂದಿ ಹಣ ಪಡೆದಿದ್ದಾರೆ. ಹೀಗಾಗಿ ಸಿಬಿಐ ಚಾಣಾಕ್ಷ ತಂಡ ಮನ್ಸೂರ್​ನನ್ನ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ತನಿಖೆ ಮುಂದುವರೆಸುವ ಸಾಧ್ಯತೆ ಇದೆ.

ಇತ್ತೀಚೆಗೆ ‌ಸಿಬಿಐ, ಐಎಂಎ ಪ್ರಕರಣದಲ್ಲಿ ಮನ್ಸೂರ್ ಖಾನ್‌ ಸೇರಿ‌ 20 ಜನರ ವಿರುದ್ಧ ಚಾರ್ಜ್​ಶೀಟ್‌ ಸಲ್ಲಿಸಿತ್ತು. ಈ ಪೈಕಿ 7 ನಿರ್ದೇಶಕರು, 5 ಜನ ಸದಸ್ಯರು, ಒಬ್ಬ ಆಡಿಟರ್ ಹಾಗೂ ಐಎಂಗೆ ಸಂಬಂಧಿಸಿದ 5 ಕಂಪನಿಗಳ‌ನ್ನ ಉಲ್ಲೇಖ ಮಾಡಿದ್ದಾರೆ. ಸದ್ಯ ಸಿಬಿಐ ತಂಡ ಸಿಲಿಕಾನ್ ಸಿಟಿಯಲ್ಲಿ ಬೀಡು ಬಿಟ್ಟಿದ್ದು, ಐಎಂಎ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ABOUT THE AUTHOR

...view details