ಕರ್ನಾಟಕ

karnataka

ETV Bharat / city

ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಸೂಚನೆ - BMTC instructs its employees not to participate in protests

ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಮೇಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎನ್ನಲಾಗ್ತಿದೆ.

ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಸೂಚನೆ

By

Published : Sep 11, 2019, 10:13 AM IST

Updated : Sep 11, 2019, 11:30 AM IST

ಬೆಂಗಳೂರು:ಮಾಜಿ ಸಚಿವಡಿ.ಕೆ. ಶಿವಕುಮಾರ್ ಅವರ ಬಂಧನ ಖಂಡಿಸಿ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಮೇಲಾಧಿಕಾರಿಗಳಿಂದ ಆದೇಶ ಹೊರಡಿಸಲಾಗಿದೆ.

ಬಿಎಂಟಿಸಿಯಲ್ಲಿ 3 ಸಾವಿರಕ್ಕೂ ಹೆಚ್ಚು ಒಕ್ಕಲಿಗ ನೌಕರರಿದ್ದಾರೆ. ಇವರು ಜಾತಿ ಬೆಂಬಲಕ್ಕೆ ನಿಲ್ಲುವ ನಿಟ್ಟಿನಲ್ಲಿ, ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಹೀಗಾಗಿ ಒಕ್ಕಲಿಗ ನೌಕರರ ಹಾಜರಾತಿ ಹಾಗೂ ಗೈರಿನ ಬಗ್ಗೆ ನಿಗಾ ಇಡುವಂತೆ ಡಿಪೋ ಮ್ಯಾನೇಜರ್ಸ್​ಗೆ ಮೇಲಾಧಿಕಾರಿಗಳಿಂದ ಸೂಚನೆ ನೀಡಲಾಗಿದೆ. ಒಂದು ವೇಳೆ ಬಿಎಂಟಿಸಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡ‌ ಮಾಹಿತಿ ಸಿಕ್ಕರೆ, ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಬಿಎಂಟಿಸಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡರೇ, ಸಾರಿಗೆ ಸಂಚಾರದ ಮೇಲೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ‌ಹೀಗಾಗಿ ಮೇಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

ಪರಿಸ್ಥಿತಿ ನೋಡಿಕೊಂಡು ಬಸ್​ಗಳನ್ನ ರಸ್ತೆಗಿಳಿಸಿಸುವಂತೆ ಸೂಚನೆ..

ಒಕ್ಕಲಿಗರ ಬೃಹತ್ ಪ್ರತಿಭಟನಾ ಜಾಥ ಹಿನ್ನೆಲೆ, ಬಿಬಿಎಂಟಿಸಿ ಡಿಪೋ ಮ್ಯಾನೇಜರ್ ಗಳಿಗೆ ಕಟ್ಟುನಿಟ್ಟಿನ ನಿರ್ದೇಶಕ ನೀಡಿರುವ ಬಿಎಂಟಿಸಿ ಎಂ‌ ಡಿ ಶಿಖಾ, ಪರಿಸ್ಥಿತಿ ನೋಡಿಕೊಂಡು ಬಸ್​ಗಳನ್ನ ರಸ್ತೆಗಿಳಿಸಿಸುವಂತೆ ಸೂಚಿಸಿದ್ದಾರೆ.

ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬಸ್ ಸಂಚಾರ ಆರಂಭಿಸುತ್ತೇವೆ. ಆದರೆ ಅಹಿತಕರ ಘಟನೆ ನಡೆದರೆ ಕೂಡಲೇ ಬಸ್ ಸಂಚಾರ ಸ್ಥಗಿತಗೊಳಿಸುತ್ತೇವೆ ಎಂದು ಎಂ ಡಿ ಮಾಹಿತಿ ನೀಡಿದ್ದಾರೆ. ‌

Last Updated : Sep 11, 2019, 11:30 AM IST

ABOUT THE AUTHOR

...view details