ಕರ್ನಾಟಕ

karnataka

ಕೋವಿಡ್ ನಿಧಿಗೆ 50 ಲಕ್ಷ, ನೆರೆ ಪರಿಹಾರಕ್ಕೆ 16 ಲಕ್ಷ ದೇಣಿಗೆ ನೀಡಿದ ಬಿಎಂಎಸ್ ಸಂಸ್ಥೆ

ಬಿಎಂಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಅವಿರಾಮ್ ಶರ್ಮಾ ಅವರು, ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ಹಾಗೂ ನೆರೆ ಪರಿಹಾರ ನಿಧಿಗೂ 16.17 ಲಕ್ಷ ದೇಣಿಗೆ ನೀಡಿದ್ದಾರೆ.

By

Published : Jun 8, 2020, 11:32 PM IST

Published : Jun 8, 2020, 11:32 PM IST

Bms donate 50 lakh to cm covid relief fund
ಮುಖ್ಯಮಂತ್ರಿ ಕೋವಿಡ್ ನಿಧಿಗೆ 50 ಲಕ್ಷ, ನೆರೆ ಪರಿಹಾರಕ್ಕೆ 16 ಲಕ್ಷ ದೇಣಿಗೆ ನೀಡಿದ ಬಿಎಂಎಸ್

ಬೆಂಗಳೂರು:ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ಬಿಎಂಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಅವಿರಾಮ್ ಶರ್ಮಾ ಅವರು,50 ಲಕ್ಷ ಮೊತ್ತದ ಚೆಕ್​ ಅನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಬಿಎಂಎಸ್ ಟ್ರಸ್ಟಿ ಶರ್ಮಾ, ಸಿಎಂ ಬಿಎಸ್​ವೈ ಭೇಟಿಯಾಗಿ ಕೋವಿಡ್ ನಿಧಿಗೆ 50 ಲಕ್ಷ ದೇಣಿಗೆ ನೀಡಿದರು.

ಜೊತೆಗೆ ರಾಜ್ಯದಲ್ಲಿ ಸಂಭವಿಸಿದ್ದ ಅನಾವೃಷ್ಟಿಗೂ ಸ್ಪಂಧಿಸಿ ನೆರೆ ಪರಿಹಾರ ನಿಧಿಗೂ 16.17 ಲಕ್ಷ ದೇಣಿಗೆ ನೀಡಿದರು.

ABOUT THE AUTHOR

...view details