ಬೆಂಗಳೂರು:ಆಕಾಶ ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವುದನ್ನು ಕಲಿತುಕೊಳ್ಳಿ ಎಂದು ಹೈದರಾಬಾದ್ಗೆ ಬರುವಂತೆ ಉದ್ಯಮಿಗಳಿಗೆ ಆಹ್ವಾನ ನೀಡಿ ಟ್ವೀಟ್ ಮಾಡಿರುವ ತೆಲಂಗಾಣ ಸಚಿವ ಕೆ.ಟಿ. ರಾಮರಾವ್ಗೆ ಬಿಜೆಪಿ ಟ್ವೀಟ್ ಮೂಲಕವೇ ತಿರುಗೇಟು ನೀಡಿದೆ.
ತಮ್ಮ ಊಟದ ತಟ್ಟೆಯಲ್ಲಿ ಬಿದ್ದ ಹೆಗ್ಗಣ ನೋಡಿ ಸುಮ್ಮನಾಗುವವರು ನೆರೆಮನೆಯವನ ಊಟದ ತಟ್ಟೆಯ ನೊಣದ ಬಗ್ಗೆ ಮಾತನಾಡುವುದು ಸಹಜ. ತೆಲಂಗಾಣದಲ್ಲಿ ಏನಾಗುತ್ತಿದೆ ಎಂಬುದು ದೇಶಕ್ಕೇ ತಿಳಿದಿದೆ. ಓಲೈಕೆ ರಾಜಕಾರಣದಿಂದ ನೆಲೆ ಕಳೆದುಕೊಂಡ ಕೆಸಿಆರ್ ಸರ್ಕಾರ ಈಗ ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರಿಗೆ ಸವಾಲೆಸೆಯುವುದು ಹಾಸ್ಯಾಸ್ಪದ ಎಂದು ಬಿಜೆಪಿ ಟಾಂಗ್ ನೀಡಿದೆ.
ಗಂಟು- ಮೂಟೆ ಕಟ್ಟಿಕೊಂಡು ಹೈದರಾಬಾದಿಗೆ ಬನ್ನಿ ಎಂದು ಉದ್ಯಮಿಗಳಿಗೆ ಸವಾಲು ಹಾಕುವ ಕೆಟಿಆರ್ ಅವರೇ, ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ನೀವು ಎಷ್ಟನೇ ಸ್ಥಾನದಲ್ಲಿದ್ದೀರಿ? ಕರ್ನಾಟಕಕ್ಕೂ ನಿಮಗೂ ಇರುವ ಅಂತರ ಎಷ್ಟು ಎಂಬುದನ್ನು ಮೊದಲು ವಿಶ್ಲೇಷಿಸಿ. ಆಕಾಶ ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವುದನ್ನು ಕಲಿತುಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.