ಕರ್ನಾಟಕ

karnataka

By

Published : Mar 19, 2022, 6:59 AM IST

ETV Bharat / city

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮುಂದೂಡಿಕೆ..!

ಹೊಸಪೇಟೆಯಲ್ಲಿ ಮಾರ್ಚ್ 30 ಮತ್ತು 31ರಂದು ನಡೆಯಬೇಕಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮುಂದೂಡಲಾಗಿದೆ.

BJP meeting postponed
ಬಿಜೆಪಿ ಸಭೆ ಮುಂದೂಡಿಕೆ

ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾರ್ಚ್ 30 ಮತ್ತು 31ರಂದು ನಡೆಯಬೇಕಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಮುಂದೂಡಲಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್‍ ಕುಮಾರ್ ಸುರಾನಾ ತಿಳಿಸಿದ್ದಾರೆ.

ಇದೇ ತಿಂಗಳ 30-31ಕ್ಕೆ ಕಾರ್ಯಕಾರಿಣಿ ಸಭೆ ನಿಗದಿ ಆಗಿತ್ತು. ಆದರೆ, ಸಂಸತ್ತಿನಲ್ಲಿ ಸಂಸದರಿಗೆ ಕಡ್ಡಾಯ ಹಾಜರಾತಿಗೆ ವಿಪ್ ಜಾರಿ ಮಾಡಿದ್ದಾರೆ. ‌ಹಾಗಾಗಿ ಕೇಂದ್ರ ಸಚಿವರು ಮತ್ತು ರಾಜ್ಯಾಧ್ಯಕ್ಷರು ಕಲಾಪದಲ್ಲಿ ಇರಬೇಕಿರುವ ಕಾರಣದಿಂದ ಕಾರ್ಯಕಾರಿಣಿ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ.

ಇದನ್ನೂ ಓದಿ:ತಾತಯ್ಯ ಜಯಂತಿ ಪಂಚಾಂಗದಂತೆ ಆಚರಿಸುವ ನಿರ್ಣಯ ಪರಿಶೀಲನೆ: ಸಚಿವ ಮಾಧುಸ್ವಾಮಿ

ಈ ಬಾರಿಯ ರಾಜ್ಯ ಕಾರ್ಯಕಾರಿಣಿ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸುವ ಸಾಧ್ಯತೆ ಇದ್ದು, ಅವರ ದಿನಾಂಕ ಖಚಿತಪಡಿಸಿಕೊಂಡು ನಂತರ ಮುಂದಿನ ಕಾರ್ಯಕಾರಿಣಿ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ..

ABOUT THE AUTHOR

...view details