ಬೆಂಗಳೂರು:ಸೀಲ್ ಡೌನ್ ಆಗಿದ್ದರೂ ನಿಯಮ ಉಲ್ಲಂಘಿಸಿ ಹೊರಗೆ ಬಂದಿದ್ದ ಇಬ್ಬರು ವ್ಯಕ್ತಿಗಳಿಗೆ ಬಿಬಿಎಂಪಿ ಮಾರ್ಷಲ್ಗಳು ಲಾಠಿ ಬೀಸಿ ಬಲ ಪ್ರಯೋಗ ಮಾಡಿದ್ದ ಘಟನೆ ಕೆ.ಆರ್. ಮಾರುಕಟ್ಟೆ ಬಳಿ ನಡೆದಿತ್ತು.
ಬಲ ಪ್ರಯೋಗ ಮಾಡಿದ ಬಿಬಿಎಂಪಿ ಮಾರ್ಷಲ್ಗಳ ಅಮಾನತು - bengaluru seal down
ನಿಯಮ ಉಲ್ಲಂಘಿಸಿದವರ ಮೇಲೆ ಲಾಠಿ ಪ್ರಹಾರ ಮಾಡಿದ್ದ ಬಿಬಿಎಂಪಿ ಮಾರ್ಷಲ್ಗಳನ್ನು ಅಮಾನತು ಮಾಡಲಾಗಿದೆ.
![ಬಲ ಪ್ರಯೋಗ ಮಾಡಿದ ಬಿಬಿಎಂಪಿ ಮಾರ್ಷಲ್ಗಳ ಅಮಾನತು Bengaluru marshals suspended](https://etvbharatimages.akamaized.net/etvbharat/prod-images/768-512-8044670-thumbnail-3x2-megha.jpg)
ನಿಯಮ ಉಲ್ಲಂಘಿಸಿದವರ ಮೇಲೆ ಲಾಠಿ ಬೀಸಿದ ಮಾರ್ಷಲ್ಗಳು
ನಿಯಮ ಉಲ್ಲಂಘಿಸಿದವರ ಮೇಲೆ ಲಾಠಿ ಬೀಸಿದ ಮಾರ್ಷಲ್ಗಳು
ಲಾಠಿ ಏಟು ನೀಡಿದ್ದಲ್ಲದೆ ಅವರನ್ನು ಮಂಡಿಯೂರಿಸಿ ನಡೆಸಿದ್ದರು. ಇದನ್ನು ವಿಡಿಯೋ ಮಾಡಿದ್ದ ಮಾರ್ಷಲ್ಗಳು ತಮ್ಮ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದರು. ಬಳಿಕ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಟೀಕೆಗೆ ಒಳಗಾಯ್ತು. ಮಾರ್ಷಲ್ಗಳ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಮಾರ್ಷಲ್ಗಳಿಗೆ ದಂಡ ವಿಧಿಸಲು ಮಾತ್ರ ಅವಕಾಶವಿದ್ದು, ಬಲ ಪ್ರಯೋಗಿಸಲು ಅವಕಾಶವಿಲ್ಲ. ಹೀಗಾಗಿ ದೀಪಕ್, ಪವನ್, ದಿನೇಶ್ ನಾಯಕ್ ಎಂಬುವವರನ್ನು ಅಮಾನತು ಮಾಡಲಾಗಿದೆ ಎಂದು ಚೀಫ್ ಮಾರ್ಷಲ್ ರಜ್ ಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ.