ಕರ್ನಾಟಕ

karnataka

ETV Bharat / city

ಒರಾಯನ್​​, ಮಂತ್ರಿಮಾಲ್​​​ ಮೇಲೆ ಅಧಿಕಾರಿಗಳ ದಾಳಿ: ಕನ್ನಡ ಬಳಸದ ಮಳಿಗೆಗಳ ಶಟರ್​​​ ಕ್ಲೋಸ್​​ - ಪಶ್ಚಿಮ ವಿಭಾಗದ ಆರೋಗ್ಯಾಧಿಕಾರಿ ಡಾ.ಬಾಲಸುಂದರ್

ಕನ್ನಡ ನಾಮಫಲಕ ಬಳಸದ ಮಾಲ್​​​ಗಳ ಮಳಿಗೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿ ಮಳಿಗೆಗಳನ್ನು ಮುಚ್ಚಿಸಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.

kn_bng_01_bbmp_mall_close_7202707
ಒರಾಯನ್,ಮಂತ್ರಿಮಾಲ್ ಗೆ ಅಧಿಕಾರಿಗಳ ದಾಳಿ: ಕನ್ನಡ ಬಳಸದ ಮಳಿಗೆಗಳ ಶಟರ್ ಕ್ಲೋಸ್

By

Published : Dec 2, 2019, 7:58 PM IST

ಬೆಂಗಳೂರು: ಕನ್ನಡ ನಾಮಫಲಕ ಬಳಸದ ಮಾಲ್​​ಗಳ ಮಳಿಗೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿ ಮಳಿಗೆಗಳನ್ನು ಮುಚ್ಚಿಸಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.

ಒರಾಯನ್, ಮಂತ್ರಿಮಾಲ್ ಮೇಲೆ ಅಧಿಕಾರಿಗಳ ದಾಳಿ: ಕನ್ನಡ ಬಳಸದ ಮಳಿಗೆಗಳ ಶಟರ್ ಕ್ಲೋಸ್

ಸುಮಾರು ಒಂದೂವರೆ ತಿಂಗಳು ಕಾಲಾವಕಾಶ ನೀಡಿದ ಬಳಿಕವೂ ಮಂತ್ರಿ ಹಾಗೂ ಒರಾಯನ್ ಮಾಲ್​​ಗಳ ಮಳಿಗೆಗಳಲ್ಲಿ ಇಂಗ್ಲಿಷ್​​ ನಾಮಫಲಕಗಳೇ ರಾರಾಜಿಸುತ್ತಿರುವ, ಕನ್ನಡ ಕಡೆಗಣಿಸಿರುವ ಮಳಿಗೆಗಳಿಗೆ ಅಧಿಕಾರಿಗಳು ಶಟರ್ ಎಳೆದಿದ್ದಾರೆ. ಪಶ್ಚಿಮ ವಿಭಾಗದ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ನೇತೃತ್ವದಲ್ಲಿ ಮಾಲ್​​ಗಳ ಮೇಲೆ ದಾಳಿ ‌ನಡೆಸಿ, ಮಂತ್ರಿಯಲ್ಲಿ ಐವತ್ತಕ್ಕೂ ಹೆಚ್ಚು ಮಳಿಗೆ ಹಾಗೂ ಒರಾಯನ್​​ನ ಮೂವತ್ತಕ್ಕೂ ಹೆಚ್ಚು ಅಂಗಡಿಗಳ ನಾಮಫಲಕ ಪರಿಶೀಲಿಸಲಾಯಿತು‌.

ಹಲವೆಡೆ ಅತಿಸಣ್ಣ ಅಕ್ಷರದಲ್ಲಿ ಕನ್ನಡ ಬಳಸಿದ್ದು, ಇನ್ನು ಕೆಲವೆಡೆ ಅಡ್ಡಾದಿಡ್ಡಿಯಾಗಿ ಕನ್ನಡ ನಾಮಫಲಕಗಳನ್ನು ಹಾಕಲಾಗಿತ್ತು. ಪಶ್ಚಿಮ ವಲಯದಲ್ಲಿ ಈವರೆಗೆ 9,828 ಅಂಗಡಿ ಮುಂಗಟ್ಟುಗಳಲ್ಲಿ 6,870 ಮಳಿಗೆಗಳು ಕನ್ನಡ ನಾಮಫಲಕ ಹಾಕಿವೆ. ಉಳಿದ ಮಳಿಗೆಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.




ABOUT THE AUTHOR

...view details