ಕರ್ನಾಟಕ

karnataka

ಬಿಜೆಪಿ ಮುಖಂಡ ಎನ್​​​.ಆರ್.ರಮೇಶ್ ವಿರುದ್ಧ ದೂರು ದಾಖಲಿಸಿದ ಬಿಬಿಎಂಪಿ ಇಂಜಿನಿಯರ್​​

By

Published : Jan 27, 2021, 8:48 PM IST

ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ, ಮಾನಸಿಕ ಒತ್ತಡ ಮತ್ತು ವೈಯಕ್ತಿಕ ತೇಜೋವಧೆ ಆರೋಪದ ಮೇಲೆ ಬಿಜೆಪಿ ಮುಖಂಡನ ವಿರುದ್ಧ ಇಂಜಿನಿಯರೊಬ್ಬರು ದೂರು ದಾಖಲಿಸಿದ್ದಾರೆ.

Complaint against BJP leader NR Ramesh
ಬಿಜೆಪಿ ಮುಖಂಡ ಎನ್​​​.ಆರ್.ರಮೇಶ್ ವಿರುದ್ಧ ದೂರು

ಬೆಂಗಳೂರು:ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್​​​.ಆರ್.ರಮೇಶ್ ವಿರುದ್ಧ ಬಿಬಿಎಂಪಿ ಮುಖ್ಯ ಅಭಿಯಂತರ ಪ್ರಹ್ಲಾದ್ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ...ರಾಜ್ಯದಲ್ಲಿಂದು 428 ಮಂದಿಗೆ ಕೊರೊನಾ ದೃಢ: 3 ಸೋಂಕಿತರು ಬಲಿ

ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ, ಮಾನಸಿಕ ಒತ್ತಡ ಮತ್ತು ವೈಯಕ್ತಿಕ ತೇಜೋವಧೆ ಮಾಡಿರುವ ಆರೋಪದ ಮೇಲೆ ಎನ್.ಆರ್.ರಮೇಶ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲು ಆಯುಕ್ತರ ಅನುಮತಿ ಕೋರಿದ್ದರು. ಅದಕ್ಕೆ ಷರತ್ತುಗಳೊಂದಿಗೆ ಆಯುಕ್ತರು ಅನುಮತಿ ನೀಡಿದ್ದಾರೆ.

ದೂರಿನ ಪ್ರತಿ

ಷರತ್ತುಗಳು:ದೂರಿಗೆ ಸಂಬಂಧಿಸಿದ ವಿಷಯ ಅಭಿಯಂತರರ ವೈಯಕ್ತಿಕ ವಿಚಾರವಾಗಿದ್ದು, ಪಾಲಿಕೆಯ ಹಸ್ತಕ್ಷೇಪ ಇರುವುದಿಲ್ಲ. ದೂರಿನ ನಿರ್ವಹಣೆಗೆ ಉಂಟಾಗುವ ಖರ್ಚು-ವೆಚ್ಚ ದೂರುದಾರರೇ ನೋಡಿಕೊಳ್ಳಬೇಕು. ಈ ಪ್ರಕರಣಕ್ಕೆ ಪಾಲಿಕೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗಿರುವುದಿಲ್ಲ ಎಂಬ ಷರತ್ತುಗಳನ್ನು ವಿಧಿಸಿದೆ.

For All Latest Updates

TAGGED:

ABOUT THE AUTHOR

...view details