ಕರ್ನಾಟಕ

karnataka

By

Published : Oct 1, 2019, 1:26 PM IST

Updated : Oct 1, 2019, 2:23 PM IST

ETV Bharat / city

ಬಿಬಿಎಂಪಿಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ: ಬೆಂಗಳೂರು ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ

ಬಿಬಿಎಂಪಿ ಮೇಯರ್​ ಹಾಗೂ ಉಪಮೇಯರ್​ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ ನಾಲ್ಕು ವರ್ಷಗಳ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತದ ಬಳಿಕ, ಕೊನೆಯ ಐದನೇ ವರ್ಷ ಬಿಜೆಪಿ, ಬಿಬಿಎಂಪಿಯ ಚುಕ್ಕಾಣಿ ಹಿಡಿದಿದೆ. ಜೋಗುಪಾಳ್ಯ ವಾರ್ಡ್​ನ ಎನ್ ಗೌತಮ್ ಕುಮಾರ್ ಮೇಯರ್ ಆಗಿ 129 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ 112 ಮತ ಪಡೆದು ಸೋತಿದ್ದು, 17 ಮತಗಳ ಅಂತರದಲ್ಲಿ ಗೌತಮ್ ಕುಮಾರ್ ಗೆದ್ದಿದ್ದಾರೆ

ಬೆಂಗಳೂರು ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ

ಬೆಂಗಳೂರು: ಬರೋಬ್ಬರಿ ನಾಲ್ಕು ವರ್ಷಗಳ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತದ ಬಳಿಕ, ಕೊನೆಯ ಐದನೇ ವರ್ಷ ಬಿಜೆಪಿ, ಬಿಬಿಎಂಪಿಯ ಚುಕ್ಕಾಣಿ ಹಿಡಿದಿದೆ. ಜೋಗುಪಾಳ್ಯ ವಾರ್ಡ್​ನ ಎನ್ ಗೌತಮ್ ಕುಮಾರ್ ಮೇಯರ್ ಆಗಿ 129 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಬಿಬಿಎಂಪಿಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ

ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ 112 ಮತ ಪಡೆದು ಸೋತಿದ್ದು, 17 ಮತಗಳ ಅಂತರದಲ್ಲಿ ಗೌತಮ್ ಕುಮಾರ್ ಗೆದ್ದಿದ್ದಾರೆ. ಇನ್ನು ಉಪಮೇಯರ್ ಆಗಿ ಬೊಮ್ಮನಹಳ್ಳಿ ವಾರ್ಡ್​ನ ರಾಮ್ ಮೋಹನ್ ರಾಜ್ ಬಹುಮತ ಪಡೆದು ಗೆದ್ದಿದ್ದಾರೆ.

ಪಕ್ಷೇತರರಲ್ಲಿ ಆನಂದ್ ಹಾಗೂ ಮುಜಾಹಿದ್ ಪಾಷಾ ಮೈತ್ರಿ ಪಕ್ಷಕ್ಕೆ ಬೆಂಬಲ ಸೂಚಿಸಿದರೆ, ಚಂದ್ರಪ್ಪ ರೆಡ್ಡಿ, ಗುಂಡಣ್ಣ(ಲಕ್ಷ್ಮಿನಾರಾಯಣ) ಗಾಯತ್ರಿ, ರಮೇಶ್, ಮಮತಾ ಶರವಣ ಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದರು‌. ಜೆಡಿಎಸ್​​ನ ಬಂಡಾಯ ಕಾರ್ಪೋರೇಟರ್​ಗಳಾದ ದೇವದಾಸ್, ಹಾಗೂ ಮಂಜುಳಾ ನಾರಾಯಣಸ್ವಾಮಿ ವಿಪ್ ಉಲ್ಲಂಘನೆ ಮಾಡಿ, ಚುನಾವಣೆಯಿಂದ ಹೊರ ನಡೆದರು. ಆದರೆ ಗೈರಾಗುತ್ತಾರೆ ಎನ್ನಲಾಗಿದ್ದ ಅನರ್ಹ ಶಾಸಕರ ಬೆಂಬಲಿಗರು, ಚುನಾವಣೆಗೆ ಹಾಜರಾಗಿ ಮೈತ್ರಿ ಪಕ್ಷಕ್ಕೇ ಬೆಂಬಲ ಸೂಚಿಸಿದರು.

ಬಿಬಿಎಂಪಿಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ

ನಾಲ್ಕು ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ:

ಮೇಯರ್-ಉಪಮೇಯರ್ ಚುನಾವಣೆ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆಯೂ ನಿಗದಿಯಾಗಿತ್ತು. ಆದರೆ, ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಮುಂದೂಡಿಕೆ ಮಾಡಿ ಚುನಾವಣೆ ಆಯುಕ್ತರಾದ ಹರ್ಷಗುಪ್ತ ಘೋಷಣೆ ಮಾಡಿದರು.

ಗುಂಡಣ್ಣನ ಕಾಲೆಳೆದ ಕಾಂಗ್ರೆಸ್ ಮುಖಂಡರು:

ಲಕ್ಷ್ಮೀನಾರಾಯಣ (ಗುಂಡಣ್ಣ) ಮೈತ್ರಿ ಪಕ್ಷಕ್ಕೆ ಬೆಂಬಲ ಸೂಚಿಸದೇ ಬಿಜೆಪಿಗೆ ಬಲಿಸಿದಾಗ ಕಾಂಗ್ರೆಸ್ ಕಾರ್ಪೋರೇಟರ್ಸ್ ಗುಂಡಣ್ಣ ಅವರ ಕಾಲೆಳೆದರು. ಕುದುರೆ ವ್ಯಾಪಾರ, ಎಷ್ಟಕ್ಕೆ ಬುಕ್ ಆಗಿದ್ದೀಯ, ನಮ್ಮ ಪರ ಕೈಎತ್ತು ಎಂದೆಲ್ಲ ಜೋರಾಗಿ ಕೂಗಿದರು.

ಚುನಾವಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಚುನಾವಣೆಯ ನಡೆಸುತ್ತಿರುವ ಕುರಿತು ಸ್ಪಷ್ಟನೆ ನೀಡುವಂತೆ, ಎಮ್​ಎಲ್​ಸಿಪಿ ಆರ್ ರಮೇಶ್, ಶರವಣ, ರಮೇಶ್ ಗೌಡ ಚುನಾವಣಾ ಆಯುಕ್ತರಾದ ಹರ್ಷಗುಪ್ತ ಅವರನ್ನು ಆಗ್ರಹಿಸಿದರು. ಆದರೆ, ಚುನಾವಣೆ ಪ್ರಕ್ರಿಯೆ ಆರಂಭವಾದ ಮೇಲೆ ಬೇರೆ ಯಾವುದೇ ಚರ್ಚೆಗೆ ಅವಕಾಶ ಇಲ್ಲ ಎಂದ ಹರ್ಷಗುಪ್ತಾ, ಚುನಾವಣೆ ಮುಂದುವರಿಸಿದರು.

ನಾಮಪತ್ರ ಹಿಂಪಡೆದ ಪದ್ಮನಾಭ ರೆಡ್ಡಿ:

ಕಡೆಯ ಕ್ಷಣದ ವರೆಗೂ ಮೇಯರ್ ಸ್ಥಾನಕ್ಕೆ ಪೈಪೋಟಿಯಲ್ಲಿದ್ದ ಪದ್ಮನಾಭ ರೆಡ್ಡಿ, ನಾಮಪತ್ರವನ್ನು ಸಲ್ಲಿಸಿದ್ದರು. ಪಕ್ಷದ ಮುಖಂಡರ ಮನವೊಲಿಕೆಯ ಬಳಿಕ ಚುನಾವಣಾ ಸಭೆಯಲ್ಲಿ ನಾಮಪತ್ರ ಹಿಂಪಡೆದರು. ಅದೇ ರೀತಿ ಬಿಜೆಪಿ ಉಪಮೇಯರ್ ಅಭ್ಯರ್ಥಿಯಾಗಿ ಮೂವರು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಮಹಾಲಕ್ಷ್ಮಿ ಹಾಗೂ ಗುರುಮೂರ್ತಿ ರೆಡ್ಡಿ ವಾಪಾಸ್ ಪಡೆದರು. ಒಟ್ಟು 257 ಮತದಾರರಲ್ಲಿ ಒಟ್ಟು ಎಂಟು ಜನ ಗೈರಾಗಿದ್ದರು.

Last Updated : Oct 1, 2019, 2:23 PM IST

ABOUT THE AUTHOR

...view details