ಕರ್ನಾಟಕ

karnataka

ETV Bharat / city

ಶಾಸಕ ಯತ್ನಾಳ್ ಹೇಳಿಕೆ ಆಧರಿಸಿ ಎಸಿಬಿಗೆ ಕಾಂಗ್ರೆಸ್​ ಪಕ್ಷದಿಂದ ದೂರು - ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಹಿನ್ನಲೆಯಲ್ಲಿ ಎಸಿಬಿಗೆ ದೂರು

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭ್ರಷ್ಟಾಚಾರದ ಬಗ್ಗೆ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರ ಮಂಜುನಾಥ್ ಎನ್.ಡಿ ಅವರು ಎಸಿಬಿಗೆ ಈ ಕುರಿತು ಸೂಕ್ತ ತನಿಖೆ ಮಾಡಬೇಕು ಎಂದು ದೂರು ಸಲ್ಲಿಸಿದ್ದಾರೆ..

Based on the statement of Basangouda Patil Yatnal Congress party filed a complaint to ACB
ಶಾಸಕ ಯತ್ನಾಳ್ ಹೇಳಿಕೆ ಆಧರಿಸಿ ಎಸಿಬಿಗೆ ದೂರು

By

Published : May 4, 2022, 7:02 PM IST

Updated : May 4, 2022, 7:20 PM IST

ಬೆಂಗಳೂರು :ಕೆಪಿಎಸ್‌ಸಿ, ಪಿಎಸ್ಐ, ಕೆಎಸ್‌ಪಿಪಿಸಿಬಿಯಲ್ಲಿ ನೇಮಕಾತಿಗೆ ಕೋಟ್ಯಂತರ ರೂಪಾಯಿ ಹಣ ನೀಡಬೇಕಾಗುತ್ತದೆ ಎಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಆಧರಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗೆ ದೂರು ನೀಡಿದೆ.

ಶಾಸಕ ಯತ್ನಾಳ್ ಹೇಳಿಕೆ ಆಧರಿಸಿ ಎಸಿಬಿಗೆ ದೂರು

ವಿಜಯಪುರ ಜಿಲ್ಲೆಯ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಕೆಪಿಎಸ್‌ಸಿ, ಪಿಎಸ್ಐ, ಕೆಎಸ್‌ಪಿಪಿಸಿಬಿಯಲ್ಲಿ ನೇಮಕಾತಿಗೆ ಕೋಟ್ಯಂತರ ರೂಪಾಯಿ ಹಣ ನೀಡಬೇಕಾಗುತ್ತದೆ ಎಂದಿದ್ದು, 'ಅವರ ಬಳಿ ದಾಖಲೆಗಳಿರುವುದರಿಂದಲೇ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಶಾಸಕ ಯತ್ನಾಳ್ ಹೇಳಿಕೆ ಆಧರಿಸಿ ಎಸಿಬಿಗೆ ದೂರು

ಭ್ರಷ್ಟಾಚಾರ ತೊಲಗಿಸುವ ಉದ್ದೇಶವಿದ್ದರೇ ಅವರೇ ತನಿಖಾ ಸಂಸ್ಥೆಗಳಿಗೆ ದೂರು ನೀಡಬೇಕಿತ್ತು. ಆದ್ದರಿಂದ ಎಸಿಬಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸಾಕ್ಷಿಗಳನ್ನು ಶಾಸಕ ಯತ್ನಾಳ್‌ರಿಂದ ಪಡೆದು ತನಿಖೆ ನಡೆಸುವಂತೆ ಕೆಪಿಸಿಸಿ ವಕ್ತಾರ ಮಂಜುನಾಥ್ ಎನ್.ಡಿ ದೂರು‌ ನೀಡಿದ್ದಾರೆ.

ಇದನ್ನೂ ಓದಿ:ಎಲ್ಲದಕ್ಕೂ ಕಾಲ ಬರಬೇಕು.. ಹಾಗೇ ಕಾಂಗ್ರೆಸ್ ಸೇರುವುದಕ್ಕೂ ಕಾಲ ಬರಬೇಕು: ವೈ.ಎಸ್.ವಿ. ದತ್ತ

Last Updated : May 4, 2022, 7:20 PM IST

For All Latest Updates

ABOUT THE AUTHOR

...view details