ಹೊಸಕೋಟೆ: ಬಸವ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಣ್ಣ ಕೈಗಾರಿಕಾ ಮತ್ತು ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ವೀರಗಾಸೆ ಕಲಾವಿದರೊಂದಿದೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿ.ವೈ.ವಿಜಯೇಂದ್ರ ಹೊಸಕೋಟೆಗೆ ಆಗಮಿಸಿದ್ದು, ಸ್ಥಳೀಯ ಬಿಜೆಪಿ ಮುಖಂಡರು ಭವ್ಯ ಸ್ವಾಗತ ಕೋರಿದ್ದಾರೆ. ಬಳಿಕ ಕೆಇಬಿ ಸರ್ಕಲ್ನಿಂದ ತಾಲೂಕು ಕಛೇರಿವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು. ಬಸವಣ್ಣನ ಪುತ್ಥಳಿಗೆ ಕ್ರೇನ್ ಮೂಲಕ ಮಾಲಾರ್ಪಣೆ ನಡೆಯಿತು.
ಬಸವ ಜಯಂತಿ: ವೀರಗಾಸೆ ಕಲಾವಿದರ ಜೊತೆ ಹೆಜ್ಜೆ ಹಾಕಿದ ಸಚಿವ ಎಂಟಿಬಿ
ಬಸವ ಜಯಂತಿಯ ಅಂಗವಾಗಿ ಹೊಸಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಣ್ಣ ಕೈಗಾರಿಕಾ ಮತ್ತು ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ವೀರಗಾಸೆ ಕಲಾವಿದರೊಂದಿದೆ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.
![ಬಸವ ಜಯಂತಿ: ವೀರಗಾಸೆ ಕಲಾವಿದರ ಜೊತೆ ಹೆಜ್ಜೆ ಹಾಕಿದ ಸಚಿವ ಎಂಟಿಬಿ basava-jayanthi-program-minister-mtb-nagaraj-dance](https://etvbharatimages.akamaized.net/etvbharat/prod-images/768-512-15186596-thumbnail-3x2-yyy.jpg)
ಬಸವ ಜಯಂತಿ ಕಾರ್ಯಕ್ರಮದಲ್ಲಿ ವೀರಾಗಾಸೆ ಕಲಾವಿದರ ಜೊತೆ ಸಖತ್ ಸ್ಟೆಪ್ ಹಾಕಿದ ಎಂಟಿಬಿ ನಾಗರಾಜ್.
Last Updated : May 4, 2022, 8:41 AM IST