ಕರ್ನಾಟಕ

karnataka

ETV Bharat / city

ಕ್ಯಾಬ್ ಅಟ್ಯಾಚ್ ಹೆಸರಲ್ಲಿ ವಂಚನೆ ಆರೋಪ: ಆರ್.ಎಸ್. ಟ್ರಾವೆಲ್ಸ್ ಮಾಲೀಕ ಸೇರಿ ಮೂವರು ಅರೆಸ್ಟ್​​! - ಕ್ಯಾಬ್ ಅಟ್ಯಾಚ್ ಹೆಸರಲ್ಲಿ ವಂಚನೆ

ಕೊರೊನಾ ಎರಡನೇ ಅಲೆ ವೇಳೆ ಲಾಕ್​ಡೌನ್ ಹಿನ್ನೆಲೆ, ಕ್ಯಾಬ್ ಮಾಲೀಕರು ಬಾಡಿಗೆ ಇಲ್ಲದೇ, ಕಾರುಗಳಿಗೆ ಇಎಂಐ ಕಟ್ಟಲಿಕ್ಕಾಗದೇ ಅರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆರ್.ಎಸ್. ಟ್ರಾವೆಲ್ಸ್ ಮಾಲೀಕ ಶಿವಕುಮಾರ್ ಹೆಚ್ಚಿನ ಬಾಡಿಗೆ ನೀಡುವುದಾಗಿ ಕಾರು ಅಟ್ಯಾಚ್ ಮಾಡಿಸಿಕೊಂಡು ವಂಚನೆ ಮಾಡಿರುವುದಾಗಿ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮೂವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

bangalore r s travels owner arrested under cab attach fraud case
ಕ್ಯಾಬ್ ಅಟ್ಯಾಚ್ ಹೆಸರಲ್ಲಿ ವಂಚಿಸಿದ ಮೂವರು ಅಂದರ್

By

Published : Jan 6, 2022, 12:22 PM IST

ಬೆಂಗಳೂರು: ಲಾಕ್​ಡೌನ್ ವೇಳೆ ಟ್ರಾವೆಲ್ಸ್ ಹೆಸರಿನಲ್ಲಿ‌ ಚಾಲಕರಿಂದ​​ ಕಾರುಗಳನ್ನು ಅಟ್ಯಾಚ್ (ಕ್ಯಾಬ್​ ಅಟ್ಯಾಚ್​) ಮಾಡಿಸಿಕೊಂಡು ಹಂತ-ಹಂತವಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಡಿ‌ ಟ್ರಾವೆಲ್ಸ್ ಮಾಲೀಕ ಸೇರಿದಂತೆ ಮೂವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬಾಗಲಗುಂಟೆಯಲ್ಲಿ ಆರ್.ಎಸ್. ಟ್ರಾವೆಲ್ಸ್ ಮಾಲೀಕ ಶಿವಕುಮಾರ್, ಸಹಚರರಾದ ಕೃಷ್ಣೆಗೌಡ ಹಾಗೂ ಶ್ರೀಕಾಂತ್ ಎಂಬುವರನ್ನು ಬಂಧಿಸಿ 75 ಕಾರುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ‌.

ಮೂಲತಃ ದಾವಣಗೆರೆಯ ಶಿವಕುಮಾರ್ ಎರಡು ವರ್ಷಗಳ ಹಿಂದೆ ಕೋಳಿ ಫಾರಂ ಹಾಗೂ ಮೆಕ್ಕೆಜೋಳ ವ್ಯಾಪಾರಿಯಾಗಿದ್ದ. ಬಿಸಿನೆಸ್​ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ.‌ ಸಾಲಗಾರರ ಕಾಟದಿಂದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಆರ್.ಎಸ್. ಟ್ರಾವೆಲ್ಸ್ ತೆರೆದಿದ್ದ. ಲಾಕ್​ಡೌನ್ ವೇಳೆ‌ ಗ್ರಾಹಕರಿಗೆ ಕಾರುಗಳನ್ನು‌ ತಮ್ಮ ಟ್ರಾವೆಲ್ಸ್​​ಗೆ ಅಟ್ಯಾಚ್ ಮಾಡಿಸಿಕೊಂಡರೆ ಹಣ ನೀಡುವುದಾಗಿ ಭರವಸೆ ನೀಡಿದ್ದ. ಶಿವಕುಮಾರ್ ಮಾತನ್ನು ನಂಬಿ ಗ್ರಾಹಕರು ತಮ್ಮ ಕಾರುಗಳನ್ನು ಬಾಡಿಗೆಗೆ ಬಿಟ್ಟಿದ್ದರು.

ಇದನ್ನೂ ಓದಿ:Weekend Curfew: ಬೆಂಗಳೂರು ಏರ್​​ಪೋರ್ಟ್​ಗೆ ತೆರಳಲು ವಾಯುವಜ್ರ ಬಸ್.. ರಾಜ್ಯದಲ್ಲಿ ಹೀಗಿರಲಿದೆ​ ಸಂಚಾರ ವ್ಯವಸ್ಥೆ

ಗ್ರಾಹಕರ ಕಾರುಗಳನ್ನು ತಮ್ಮ ಕಂಪನಿಗೆ ಅಟ್ಯಾಚ್ ಮಾಡಿಸಿಕೊಂಡು ಬಳಿಕ ಕಾರುಗಳನ್ನು ಕೇರಳ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ. ಆರಂಭದಲ್ಲಿ ಇದೇ ಹಣವನ್ನು ಗ್ರಾಹಕರಿಗೆ ಬಾಡಿಗೆ ರೂಪದಲ್ಲಿ ನೀಡುತ್ತಿದ್ದ ಎನ್ನಲಾಗ್ತಿದೆ. ಈತನ ವಂಚನೆ ಬಯಲಿಗೆ ಬರುತ್ತಿದ್ದಂತೆ ಹತ್ತಾರು ಜನರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಚಿಯಾಗಿದ್ದಾರೆ.

ABOUT THE AUTHOR

...view details