ಕರ್ನಾಟಕ

karnataka

ETV Bharat / city

ದುಬಾರಿ ದಂಡ ಇಳಿಕೆ: ಸರ್ಕಾರದ ಆದೇಶ ಸ್ವಾಗತಾರ್ಹ ಎಂದ ಸಿಲಿಕಾನ್​​​ ಸಿಟಿ ಮಂದಿ - traffic rules relief

ರಾಜ್ಯ ಸರ್ಕಾರ ಕಡೆಗೂ ಸಂಚಾರಿ‌ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ದುಬಾರಿ ದಂಡದಿಂದ ಬೇಸತ್ತಿದ್ದ ಮಂದಿಗೆ ಸರ್ಕಾರ ಹೊರಡಿಸಿರುವ ಆದೇಶ ಖುಷಿ ತಂದಿದ್ದು, ಸಿಲಿಕಾನ್ ಸಿಟಿ ಮಂದಿ ಸರ್ಕಾರದ ಆದೇಶವನ್ನು ಸ್ವಾಗತಿಸಿದ್ದಾರೆ.

ಸರ್ಕಾರದ ಆದೇಶ ಸ್ವಾಗತಾರ್ಹ ಎಂದ ಸಿಲಿಕಾನ್ ಸಿಟಿ ಮಂದಿ

By

Published : Sep 22, 2019, 4:28 AM IST

ಬೆಂಗಳೂರು: ವಾಹನ ಸವಾರರಿಗೆ ರಾಜ್ಯ ಸರ್ಕಾರ ಕೊಂಚ ರಿಲೀಫ್ ನೀಡಿದೆ. ದುಬಾರಿ ದಂಡದಿಂದ ಬೇಸತ್ತಿದ್ದ ಸಿಲಿಕಾನ್​ ಸಿಟಿ ಮಂದಿ ದಂಡ ಪ್ರಮಾಣ ಇಳಿಕೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಸ್ವಾಗತಿಸಿದ್ದಾರೆ.

ಈ ಹಿಂದಿನ ದಂಡದ ಮೊತ್ತಕ್ಕೆ ವಾಹನ ಸವಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇಷ್ಟು ಪ್ರಮಾಣದಲ್ಲಿ ದಂಡವನ್ನ ವಿಧಿಸಿದರೆ ವಾಹನ ಚಾಲನೆ ಮಾಡುವುದಕ್ಕಿಂತ ಸುಮ್ಮನಿರೋದೇ ವಾಸಿ ಎಂಬ ಮಾತುಗಳು ಕೇಳಿಬಂದಿತ್ತು. ಸಂಚಾರಿ ಪೊಲೀಸರು ಹಾಗೂ ವಾಹನ ಸವಾರರ ಮಧ್ಯೆ ಸಂಚಾರಿ ದಂಡದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿನಿತ್ಯ ಗಲಾಟೆಗಳು ನಡೆಯುತ್ತಿದ್ದವು. ಇದನ್ನೆಲ್ಲ ಮನಗಂಡ ರಾಜ್ಯ ಸರ್ಕಾರ ಕಡೆಗೂ ಸಂಚಾರಿ‌ ದಂಡದ ಮೊತ್ತವನ್ನ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

'ದುಬಾರಿ ದಂಡ ಇಳಿಸಿದ್ದು ಖುಷಿ ಆಯ್ತು'

ಸರ್ಕಾರದ ಆದೇಶ ಕೈ ತಲುಪುತ್ತಿದ್ದಂತೆ ಈ‌ ಕ್ಷಣದಿಂದಲೇ ಸಂಚಾರಿ ನಿಯಮ ಉಲ್ಲಂಘನೆ ವೇಳೆ ಹೊಸ ಸಂಚಾರಿ ದಂಡದ ಮೊತ್ತವನ್ನ ಅನುಸರಿಸುವಂತೆ ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಸಂಚಾರಿ ಜಂಟಿ ಆಯುಕ್ತ ರವಿಕಾಂತೇಗೌಡ ಸೂಚಿಸಿದ್ದಾರೆ.

ಆದೇಶ ಹೊರ ಬೀಳುತ್ತಿದ್ದಂತೆ ರಾಜ್ಯ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ದಂಡದ ಮೊತ್ತವನ್ನ ಹೇರಿಕೆ ಮಾಡಿತ್ತು. ಈಗ ಅರ್ಧದಷ್ಟು ಇಳಿಕೆ ಮಾಡಿರೋದು ಸ್ವಾಗತಾರ್ಹ. ಸರ್ಕಾರ ದಂಡದ ಜೊತೆಗೆ ರಸ್ತೆಗಳಲ್ಲಿನ ಗುಂಡಿಗಳನ್ನ ಮುಚ್ಚುವತ್ತ ಗಮನ ಕೊಡಬೇಕೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details