ಕರ್ನಾಟಕ

karnataka

By

Published : May 11, 2020, 6:03 PM IST

ETV Bharat / city

ಮನೆ, ಮನೆಗೆ ತೆರಳಿ ಆರೋಗ್ಯ ತಪಾಸಣೆ, ಕೊರೊನಾ ಕುರಿತು ಜಾಗೃತಿ

ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿ ಕೊರೊನಾ ಕುರಿತು ಬಿಜೆಪಿ ಯುವ ಮುಖಂಡ ಚನ್ನಕೇಶವ ಜಾಗೃತಿ ಮೂಡಿಸಿದರು.

awareness about corona virus
ಆರೋಗ್ಯ ತಪಾಸಣೆ

ಕೆ.ಆರ್.ಪುರ: ದೇವಸಂದ್ರ, ಬಸವನಪುರ, ಕೆ.ಆರ್.ಪುರ ವಾರ್ಡ್​​​ಗಳ ಮನೆಮನೆಗೆ ತೆರಳಿ ನುರಿತ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ನಡೆಸಿ ಕೊರೊನಾ ಕುರಿತು ಬಿಜೆಪಿ ಯುವ ಮುಖಂಡ ಚನ್ನಕೇಶವ ಜಾಗೃತಿ ಮೂಡಿಸಿದರು.

ಈ ಕುರಿತು ಮಾತನಾಡಿದ ಚನ್ನಕೇಶವ, ಶಾಸಕ ಬೈರತಿ ಬಸವರಾಜ್ ಹಾಗೂ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಆರಂಭಿಕವಾಗಿ ಕೆ.ಆರ್.ಪುರ ಕ್ಷೇತ್ರದ ಜನರಿಗೆ ತಪಾಸಣೆ ಮಾಡಲಾಗುತ್ತದೆ. ಅಲ್ಲದೇ, ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಬಡವರಿಗೆ ದಿನಸಿ, ಆಹಾರ ಧಾನ್ಯ ವಿತರಿಸುತ್ತಿದ್ದೇವೆ. ರೈತರಿಗೆ ನೆರವಾಗುವ ಉದ್ದೇಶದಿಂದ ಚಿಕ್ಕಬಳ್ಳಾಪುರ, ಮತ್ತು ಕೋಲಾರ ರೈತರಿಗೆ ಮುಂಗಡ ಹಣ ನೀಡಿ 50 ಟನ್ ತರಕಾರಿ ಖರೀದಿಸಿ 10 ಸಾವಿರ ಜನರಿಗೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details