ಬೆಂಗಳೂರು:ಖರ್ಚಿಗೆ ಹಣವಿಲ್ಲವೆಂದು ಸರಗಳ್ಳತನಕ್ಕೆ ಇಳಿದಿದ್ದ ಆಸಾಮಿಯನ್ನ ನಗರದ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 9.5 ಗ್ರಾಂ ತೂಕದ 40 ಸಾವಿರ ಮೌಲ್ಯದ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.
ಖರ್ಚಿನ ಹಣಕ್ಕಾಗಿ ಸರಗಳ್ಳತನಕ್ಕಿಳಿದ ಪಿಯುಸಿ ವಿದ್ಯಾರ್ಥಿ: ಕಳ್ಳನನ್ನು ಚೇಸ್ ಮಾಡಿ ಹಿಡಿದ ಆಟೋ ಡ್ರೈವರ್ - ಬೆಂಗಳೂರಲ್ಲಿ ಸರಗಳ್ಳತನ
ಖರ್ಚಿಗೆ ಹಣ ಇಲ್ಲ ಇಲ್ಲವೆಂದು ಸರಗಳ್ಳತನ ಮಾಡುತ್ತಿದ್ದ ಪಿಯುಸಿ ವಿದ್ಯಾರ್ಥಿಯನ್ನು ಆಟೋ ಚಾಲಕರೊಬ್ಬರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
![ಖರ್ಚಿನ ಹಣಕ್ಕಾಗಿ ಸರಗಳ್ಳತನಕ್ಕಿಳಿದ ಪಿಯುಸಿ ವಿದ್ಯಾರ್ಥಿ: ಕಳ್ಳನನ್ನು ಚೇಸ್ ಮಾಡಿ ಹಿಡಿದ ಆಟೋ ಡ್ರೈವರ್ chain](https://etvbharatimages.akamaized.net/etvbharat/prod-images/768-512-13312373-thumbnail-3x2-bng.jpg)
ದುಡಿಮೆ ಇಲ್ಲದಿದ್ದಾಗ ಖರ್ಚಿಗೆ ಕಾಸು ಇಲ್ಲದಿದ್ದಾಗ ಕೆಲವರು ಅಡ್ಡ ದಾರಿ ಹಿಡಿಯುತ್ತಾರೆ. ಇದೇ ರೀತಿ ಖರ್ಚಿಗೆ ದುಡ್ಡಿಲ್ಲದ ಕಾರಣ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಸರಗಳ್ಳತನಕ್ಕೆ ಮುಂದಾಗಿದ್ದಾನೆ. ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ 5 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಸರ ಕಿತ್ತುಕೊಂಡ ಬಳಿಕ ಮಹಿಳೆ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾಳೆ. ಆಗ ಸ್ಥಳದಲ್ಲೇ ಇದ್ದ ಆಟೋ ಡ್ರೈವರ್ 2 ಕಿಮೀ ವರೆಗೂ ಚೇಸ್ ಮಾಡಿ ಕಳ್ಳನನ್ನು ಹಿಡಿದಿದ್ದಾರೆ.
ಆಟೋ ಚಾಲಕ ರುದ್ರೇಶ್ ಎಂಬುವವರು ಕಳ್ಳನನ್ನು ಹಿಡಿದು ಸೋಲದೇವನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋ ಚಾಲಕನ ಕಾರ್ಯಕ್ಕೆ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.