ಕರ್ನಾಟಕ

karnataka

ETV Bharat / city

ಲಾಕ್​ಡೌನ್​ಗೂ ಕೇರ್​ ಮಾಡದೆ ಜೂಜಾಡುತ್ತಿದ್ದ 9 ಮಂದಿ ಬಂಧನ - North East Division DCP CK Baba

ಯಲಹಂಕ-ಬಾಗಲೂರು ಕ್ರಾಸ್​ನ ವಿನಾಯಕ ನಗರದ ನಿರ್ಮಾಣ ಹಂತದ ಬಿಲ್ಡಿಂಗ್​​​ನಲ್ಲಿ ಜೂಜಾಡುತ್ತಿದ್ದ 9 ಮಂದಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

Bangalore
ಜೂಜಾಡುತ್ತಿದ್ದ 9 ಮಂದಿ ಬಂಧನ

By

Published : May 31, 2021, 9:59 AM IST

ಬೆಂಗಳೂರು:ಕೊರೊನಾ ಲಾಕ್​ಡೌನ್​ಗೂ ಕೇರ್​ ಮಾಡದೆ ಜೂಜಾಟದಲ್ಲಿ ನಿರತರಾಗಿದ್ದ ಜನರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಲಾಕ್​ಡೌನ್​ಗೂ ಕೇರ್​ ಮಾಡದೆ ಜೂಜಾಡುತ್ತಿದ್ದ 9 ಮಂದಿ ಬಂಧನ

ಲಿಖಿತ್, ಆನಂತಕುಮಾರ್‌, ನಾಗೇಂದ್ರ ಕುಮಾರ್, ಮುನಿಕೃಷ್ಣ, ಶ್ರೀನಿವಾಸ, ಶ್ರೀನಿವಾಸಲು, ಪ್ರಶಾಂತ್, ಮಂಜುನಾಥ, ಮಂಜೇಗೌಡ ಬಂಧಿತರು. ಇವರು ಯಲಹಂಕ-ಬಾಗಲೂರು ಕ್ರಾಸ್​ನ ವಿನಾಯಕ ನಗರದ ಕೃಷ್ಣವೇಣಿ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಬಿಲ್ಡಿಂಗ್​​​ನಲ್ಲಿ ಜೂಜಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಾಗಲೂರು ಠಾಣೆಯ ಇನ್ಸ್‌ಪೆಕ್ಟರ್‌ ಪ್ರಶಾಂತ್.ಆರ್.ವರ್ಣಿ ತಂಡ ಆರೋಪಿಗಳನ್ನು ಬಂಧಿಸಿದೆ.

ಆರೋಪಿಗಳಿಂದ 6 ಲಕ್ಷದ 70 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಬಾಗಲೂರು ಪೊಲೀಸರ ಕಾರ್ಯಾಚರಣೆಯ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಟ್ವೀಟ್ ಮೂಲಕ ಮಾಹಿತಿ ಮಾಡಿದ್ದಾರೆ.

ಇದನ್ನೂ ಓದಿ:ಹೊಳೆನರಸೀಪುರದಲ್ಲಿ ನಾಲ್ವರ ಕೊಲೆ ಪ್ರಕರಣ: ಘಟನೆಯ ವಿಡಿಯೋ ವೈರಲ್

ABOUT THE AUTHOR

...view details