ಕರ್ನಾಟಕ

karnataka

ETV Bharat / city

ಪೊಲೀಸ್ ಠಾಣೆಯಲ್ಲಿದ್ದ ಆರೋಪಿ ಎಸ್ಕೇಪ್: ಖದೀಮನಿಗೆ ಶೋಧ

ಪ್ರಕರಣವೊಂದಕ್ಕೆ ಸಂಬಂಧಿಸಿ ಇಂದು ಬೆಳಗ್ಗೆ ಕಲಾಸಿಪಾಳ್ಯ ಪೊಲೀಸರು ಠಾಣೆಗೆ ಆರೋಪಿಯನ್ನು ಕರೆತಂದಿದ್ದರು. ಠಾಣೆಯಲ್ಲಿ ಕುಳಿತಿದ್ದ ಆರೋಪಿ ಏಕಾಏಕಿ ಎಸ್ಕೇಪ್ ಆಗಿದ್ದಾನೆ. ಇದನ್ನು ಕಂಡ ಪೊಲೀಸರು ಸುಮಾರು 1 ಕಿ.ಮೀ ವರೆಗೂ ಚೇಸ್ ಮಾಡಿದರೂ ಪೊಲೀಸರಿಗೆ ಕೈಗೆ ಸಿಕ್ಕಿಲ್ಲ.

By

Published : Mar 7, 2021, 6:20 PM IST

accused-escape-from-kalasipalya-police-station
ಆರೋಪಿ ಎಸ್ಕೇಪ್

ಬೆಂಗಳೂರು:ಕಳ್ಳತನ ಪ್ರಕರಣವೊಂದರಲ್ಲಿ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

ಪೊಲೀಸ್ ಠಾಣೆಯಲ್ಲಿದ್ದ ಆರೋಪಿ ಎಸ್ಕೇಪ್

ಪ್ರಕರಣವೊಂದಕ್ಕೆ ಸಂಬಂಧಿಸಿ ಇಂದು ಬೆಳಗ್ಗೆ ಕಲಾಸಿಪಾಳ್ಯ ಪೊಲೀಸರು ಠಾಣೆಗೆ ಆರೋಪಿಯನ್ನು ಕರೆತಂದಿದ್ದರು. ಠಾಣೆಯಲ್ಲಿ ಕುಳಿತಿದ್ದ ಆರೋಪಿ ಏಕಾಏಕಿ ಪರಾರಿ ಆಗಿದ್ದಾನೆ. ಇದನ್ನು ಕಂಡ ಪೊಲೀಸರು ಸುಮಾರು 1 ಕಿ.ಮೀ ವರೆಗೂ ಚೇಸ್ ಮಾಡಿದರೂ ಪ್ರಯೋಜನವಾಗಿಲ್ಲ.

ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ‌. ಆತನ ಹೆಸರು, ಎಷ್ಟು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದರ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ABOUT THE AUTHOR

...view details