ಕರ್ನಾಟಕ

karnataka

By

Published : Jun 7, 2022, 10:24 PM IST

ETV Bharat / city

ಆಪರೇಷನ್ ತಾಹಿಬ್ ಬಂಧ‌ನ ಕಾರ್ಯಾಚರಣೆ ಹೇಗಿತ್ತು..? ಖೆಡ್ಡಾಕ್ಕೆ ಉಗ್ರ ಬಿದ್ದಿದ್ದೆಂಗೆ ಗೊತ್ತಾ?

ಬೆಂಗಳೂರಿನಲ್ಲಿ ಉಗ್ರನ‌ ಕುಟುಂಬ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದರು. ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿ 15 ದಿನಗಳ ಹಿಂದೆ ಬೆಂಗಳೂರಿಗೆ ಬಂದ ಇನ್‌ಸ್ಪೆಕ್ಟರ್, ಪಿಎಸ್ಐ ಹಾಗೂ ಇಬ್ಬರು ಕಾನ್ ಸ್ಟೇಬಲ್​​ಗಳು ಮಫ್ತಿಯಲ್ಲಿ ಎರಡು ದಿನಗಳ ಕಾಲ ಮಸೀದಿ‌ ಸುತ್ತಮುತ್ತ ಕಾರ್ಯಾಚರಣೆ ನಡೆಸಿದ್ದಾರೆ.

absconding  terrorist arrested in Bangalore
ಟೆರರಿಸ್ಟ್ ಅರೆಸ್ಟ್

ಬೆಂಗಳೂರು:ಭಯೋತ್ಪಾದನೆ ಸಂಘಟನೆಯಲ್ಲಿ ಗುರುತಿಸಿಕೊಂಡು ರಾಜಧಾನಿಯಲ್ಲಿ ಕಳೆದ ಎರಡು ವರ್ಷಗಳಿಂದ ಅವಿತುಕೊಂಡಿದ್ದ ಉಗ್ರನನ್ನು ಒಂದು ವಾರದ ಹಿಂದೆ ಜಮ್ಮು- ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ ಆಗಿದ್ದ ತಾಹಿಬ್ ಹುಸೇನ್ ಬಂಧಿತ ಉಗ್ರನಾಗಿದ್ದಾನೆ.

ಹುಸೇನ್​ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಓಕಳಿಪುರಂ ಮಸೀದಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ತಮ್ಮ ಹೆಸರು ಗೊತ್ತಾಗದಂತೆ ಎಚ್ಚರವಹಿಸಿದ್ದ ಉಗ್ರ ತಾರೀಕ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ. ಈತನ ಪತ್ತೆಗಾಗಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆ ನಿರಂತರವಾಗಿ ಶೋಧ ನಡೆಸಿದ್ದರೂ ಸುಳಿವು ಮಾತ್ರ ಸಿಕ್ಕಿರಲಿಲ್ಲ.

ಬೆಂಗಳೂರಿನಲ್ಲಿ ಉಗ್ರನ‌ ಕುಟುಂಬ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದರು. ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿ 15 ದಿನಗಳ ಹಿಂದೆ ಬೆಂಗಳೂರಿಗೆ ಬಂದ ಇನ್ಸ್​​​​​​ಪೆಕ್ಟರ್​, ಪಿಎಸ್ಐ ಹಾಗೂ ಇಬ್ಬರು ಕಾನ್​​​ಸ್ಟೇಬಲ್​​ಗಳು ಮಫ್ತಿಯಲ್ಲಿ ಎರಡು ದಿನಗಳ ಕಾಲ ಮಸೀದಿ‌ ಸುತ್ತಮುತ್ತ ಕಾರ್ಯಾಚರಣೆ ನಡೆಸಿದ್ದಾರೆ. ಓಕಳಿಪುರ ಬಳಿ ಮಸೀದಿ ಅಂಟಿಕೊಂಡಂತೆ ಬಾಡಿಗೆ ಮನೆಯಲ್ಲಿ ಇರುವುದನ್ನು‌ ಖಚಿತಪಡಿಸಿಕೊಂಡಿದ್ದಾರೆ.

ರಾಜ್ಯ ಗುಪ್ತಚರ ಇಲಾಖೆಯು ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ‌ ನೀಡಿದೆ.‌ ಕೂಡಲೇ ಶ್ರೀರಾಮಪುರ ಪೊಲೀಸರಿಗೆ ಕಮೀಷನರ್ ಸೂಚನೆ‌ ನೀಡಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಅಂಜನ್ ರಾಜ್ ವತ್ ಮತ್ತು ತಂಡ ಜೂನ್ 29 ರಾತ್ರಿ ಮನೆಯಲ್ಲೇ ಇರುವಾಗಲೇ ವಶಕ್ಕೆ‌ ಪಡೆದುಕೊಂಡು ಜಮ್ಮು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಹೆಸರು ಬದಲಾಯಿಸಿ ಹೆಂಡತಿ -ಮಕ್ಕಳೊಂದಿಗಿದ್ದ ಉಗ್ರ:ಬಂಧಿತ ಉಗ್ರ ತಾಹೀಬ್ ತಾರೀಕ್ ಎಂದು ಹೆಸರು ಬದಲಾಯಿಸಿ ಕೊಂಡು ಹೆಂಡತಿ ಮಕ್ಕಳ ಜೊತೆ ವಾಸವಿದ್ದ‌. ಮಸೀದಿ ಮೌಲ್ವಿಗಳ ಜೊತೆ ಸಂಪರ್ಕ ಹೊಂದಿದ್ದ. ಜೀವನಕ್ಕಾಗಿ ಲೋಡ್ - ಅನ್ ಲೋಡಿಂಗ್ ಕೆಲಸ ಮಾಡುತ್ತಿದ್ದ. ಈತನಿಗೆ ಮೌಸಿಂ ಎಂಬಾತ ಸಿಮ್ ಕೊಡಿಸಿದ್ದ.

ಉಗ್ರನ ಬಂಧನ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯ ಪೊಲೀಸರಿಗೆ ಮನೆಗೆ ಹೋಗಿ ಪರಿಶೀಲಿಸಿದ್ದಾರೆ‌. ಉಗ್ರನ ಬಂಧನ ಬಳಿಕ ಮನೆಯಲ್ಲಿದ್ದ ಹೆಂಡತಿ - ಮಕ್ಕಳು ಸಹ ನಗರ ತೊರೆದು ಜಮ್ಮು ಕಾಶ್ಮೀರಕ್ಕೆ ಹೋಗಿರುವುದು ಗೊತ್ತಾಗಿದೆ. ತಾಲಿಬ್ ಹುಸೇನ್ ಬಾಡಿಗೆಗೆ ಇದ್ದ ಹಳೆ ಮನೆಗೆ‌ ತೆರಳಿ ಪೊಲೀಸರು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಈ ವೇಳೆ ಮನೆ ಮಾಲೀಕರು ಬದಲಾಗಿದ್ದಾರೆ. ನೆರೆಹೊರೆಯವರಿಂದ ತಾಲಿಬ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಮಸೀದಿ ಅಧ್ಯಕ್ಷ ಅನ್ವರ್ ಮಾಡ್ವ ಪ್ರತಿಕ್ರಿಯಿಸಿ ಉಗ್ರ ತಾಲಿಬ್ ಹುಸೇನ್ ಜೊತೆಗಿದ್ದ ಪತ್ನಿ ಅಣ್ಣ ಜಮ್ಮುವಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು.‌ ಹೀಗಾಗಿ ಅವರಿಗೆ ಮನೆ ಕೊಡುವ ಮುನ್ನ ತುಂಬಾ ಯೋಚಿಸಲಿಲ್ಲ. ಅವರ ಬಳಿ ಎಲ್ಲ ಐಡಿ ಕಾರ್ಡ್ ಗಳಿದ್ದವು. ಜಮ್ಮು ಕಾಶ್ಮೀರ ಪೊಲೀಸರು ಬಂದ ನಂತರ ಉಗ್ರನ ವಿಷಯ ತಿಳಿದಿದೆ ಎಂದು‌‌ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಕೇರಳ ಪೊಲೀಸರಿಂದ ಸಾರ್ವಜನಿಕರಿಗೆ ಬಂದೂಕು ತರಬೇತಿಗಾಗಿ ಪಠ್ಯಕ್ರಮ ಅಭಿವೃದ್ಧಿ!

ABOUT THE AUTHOR

...view details