ಕರ್ನಾಟಕ

karnataka

ETV Bharat / city

ಮದ್ಯ ಸೇವಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಯುವಕನ ಕೊಂದ ಸ್ನೇಹಿತ - forcing him to have sex

ಕಳೆದ ಶನಿವಾರ ರಾತ್ರಿ 11 ಗಂಟೆಗೆ ಕಬ್ಬನ್‌ಪೇಟೆ ಮುಖ್ಯರಸ್ತೆಯ ಸೊಪ್ಪಿನ ಮಾರ್ಕೆಟ್ ಬಳಿ ಲೈಂಗಿಕ ಕ್ರಿಯೆ ವಿಚಾರವಾಗಿ ಸ್ನೇಹಿತರಿಬ್ಬರ ನಡುವೆ ಜಗಳ ನಡೆದಿದೆ.

ಯುವಕ
ಯುವಕ

By

Published : Jan 11, 2021, 7:57 PM IST

ಬೆಂಗಳೂರು:ಮದ್ಯಪಾನ ಮಾಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ತನ್ನ ಸ್ನೇಹಿತನನ್ನು ಯುವಕನೋರ್ವ ಕೊಲೆ ಮಾಡಿದ್ದು, ಆರೋಪಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ಅಜಿತ್ ಅಲಿಯಾಸ್ ಚೋಟು (30) ಕೊಲೆಯಾದವನು. ಈತನ ಸ್ನೇಹಿತ ಬಳ್ಳಾರಿ ಜಿಲ್ಲೆ ಹೊಸಪೇಟೆ ಮೂಲದ ಚಂದ್ರಕುಮಾರ್ ಕೊಲೆಗೈದ ಆರೋಪಿ. ಅಜಿತ್ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈ ವೇಳೆ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರೂ ಬಸ್ ನಿಲ್ದಾಣ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಮಲಗುತ್ತಿದ್ದರಂತೆ.

ಕಳೆದ ಶನಿವಾರ ರಾತ್ರಿ 11 ಗಂಟೆಗೆ ಕಬ್ಬನ್‌ಪೇಟೆ ಮುಖ್ಯರಸ್ತೆಯ ಸೊಪ್ಪಿನ ಮಾರ್ಕೆಟ್ ಬಳಿ ಅಜಿತ್​​ ಕುಡಿದು ಚಂದ್ರಕುಮಾರ್​ನನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ‌‌. ಈ ವೇಳೆ ಇಬ್ಬರ ನಡುವೆ ಜಗಳ ನಡೆದು ಚಂದ್ರಕುಮಾರ್​​ ಗುಂಡು ಕಲ್ಲನ್ನು ಅಜಿತ್​ನ ತಲೆಯ ಮೇಲೆ ಹಾಕಿ ಕೊಲೆ ಮಾಡಿದ್ದಾನೆ‌.

ಹಲಸೂರು ಗೇಟ್​​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details