ಕರ್ನಾಟಕ

karnataka

ETV Bharat / city

ಪ್ರೀತಿಸುವಂತೆ ಕಾಟ, ಪೊಲೀಸರ ಹೆಸರಲ್ಲಿ ಹೆದರಿಸಿದ ಕಿರಾತಕರು: ನೊಂದ ಯುವತಿ ಆತ್ಮಹತ್ಯೆ - ಬೆಂಗಳೂರಲ್ಲಿ ಯುವತಿ ಆತ್ಮಹತ್ಯೆ

ಮದುವೆ ಆಗುವಂತೆ ಒತ್ತಾಯಿಸಿ, ಕರೆ ಮಾಡಿಸಿ ಬೆದರಿಕೆ ಹಾಕಿದ್ದಕ್ಕೆ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಂಧಿತ ಆರೋಪಿಗಳು,ಬೆಂಗಳೂರಲ್ಲಿ ಯುವತಿ ಆತ್ಮಹತ್ಯೆ
ಬಂಧಿತ ಆರೋಪಿಗಳು

By

Published : Dec 16, 2021, 7:30 PM IST

ಬೆಂಗಳೂರು: ಪಾಗಲ್ ಪ್ರೇಮಿಯ ಕಾಟಕ್ಕೆ ಹೆದರಿ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ದೊಡ್ಡ ಬೀದರಕಲ್ಲುನಲ್ಲಿ ನಡೆದಿದೆ. ಮಾನಸಾ (ಹೆಸರು ಬದಲಿಸಲಾಗಿದೆ) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಅರುಣ್ ಎನ್ನುವ ಪಾಗಲ್ ಪ್ರೇಮಿಯ ಬೆದರಿಕೆಯಿಂದಾಗಿ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.

ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಅರುಣ್​ ಪೀಡಿಸುತ್ತಿದ್ದನಂತೆ. ಅಷ್ಟೇ ಅಲ್ಲ ತನ್ನ ಸ್ನೇಹಿತ ಗೋಪಾಲ್ ಎಂಬಾತನ ಮೂಲಕ ಯುವತಿಯ ಮಾವ ಪ್ರಜ್ವಲ್​​ಗೆ ಫೋನ್ ಮಾಡಿಸಿ, ಬಸವೇಶ್ವರ ನಗರ ಪೊಲೀಸ್ ಸ್ಟೇಷನ್​ನಿಂದ ಫೋನ್ ಮಾಡುತ್ತಿದ್ದೇನೆ. ಮಾನಸಾಳನ್ನು ಅರುಣ್​ಗೆ ಮದುವೆ ಮಾಡಿಕೊಡದಿದ್ದರೆ, ಅರುಣ್ ಸೂಸೈಡ್ ಮಾಡಿಕೊಳ್ಳುತ್ತಾನೆ. ಆಗ ನಿಮ್ಮ ಮೇಲೆ ಎಫ್ಐಆರ್ ದಾಖಲಾಗುತ್ತದೆ ಎಂದು ಹೆದರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದ ಮನನೊಂದ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪೋಷಕರು ದೂರು ನೀಡಿದ್ದು, ಸದ್ಯ ಉತ್ತರ ವಿಭಾಗದ ಪೀಣ್ಯ ಪೊಲೀಸ್ ಸಿಬ್ಬಂದಿ ಅರುಣ್ ಮತ್ತು ಗೋಪಾಲ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಯಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details