ಬೆಂಗಳೂರು:ರಾಜ್ಯ ರಾಜಧಾನಿಯ ಕೇಂದ್ರ ಬಿಂದು ಅಂದರೆ ಅದುವೇ ಮುಖ್ಯ ಬಸ್ ನಿಲ್ದಾಣ. ಹೀಗಾಗಿ ರಾಜ್ಯ ಮತ್ತು ಅನ್ಯ ರಾಜ್ಯಗಳಿಂದ ಬೇರೆ ಬೇರೆ ಭಾಗಗಳಿಂದ ಬರುವ ಜನರಿಗೆ ಗುರುತು ಕೇಂದ್ರ ಮೆಜೆಸ್ಟಿಕ್ ಬಸ್ ನಿಲ್ದಾಣ. ನಿತ್ಯ ಸಾವಿರಾರು ಬಸ್ಗಳ ಸಂಚಾರ, ಲಕ್ಷಾಂತರ ಪ್ರಯಾಣಿಕರ ಓಡಾಟದಿಂದ ಯಾವಾಗಲೂ ಗಿಜಿಗುಡುತ್ತಿರುತ್ತದೆ.
ಮೆಜೆಸ್ಟಿಕ್ನಲ್ಲಿ ಅಪರಾಧ ತಡೆಗೆ ಕೆಎಸ್ಆರ್ಟಿಸಿ ಮೂರನೇ ಕಣ್ಣು! - ಕೆಎಸ್ಆರ್ಟಿಸಿ ಮೆಜೆಸ್ಟಿಕ್ ನಿಲ್ದಾಣ
ಸಾಂಕ್ರಾಮಿಕ ಕೋವಿಡ್ ಸಮಯವಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಅಪರಾಧ ಕೃತ್ಯಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ, ಮತ್ತಷ್ಟು ಹೆಚ್ಚಿನ ಸುರಕ್ಷತೆ ಕೈಗೊಂಡಿದ್ದೇವೆ ಎಂದು ಕೆಎಸ್ಆರ್ಟಿಸಿ ಮೆಜೆಸ್ಟಿಕ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಹೇಳಿದರು.
![ಮೆಜೆಸ್ಟಿಕ್ನಲ್ಲಿ ಅಪರಾಧ ತಡೆಗೆ ಕೆಎಸ್ಆರ್ಟಿಸಿ ಮೂರನೇ ಕಣ್ಣು! KSRTC Bus Station](https://etvbharatimages.akamaized.net/etvbharat/prod-images/768-512-9524469-thumbnail-3x2-sana.jpg)
ಹೆಚ್ಚು ಜನಸಂದಣಿ ಪ್ರದೇಶದಲ್ಲಿ ಕಳ್ಳತನ, ದೈಹಿಕ ಹಲ್ಲೆ ಹೀಗೆ ಹಲವು ಅಪರಾಧಗಳು ಜರುಗುವುದು ಸಾಮಾನ್ಯ. ಹೀಗಾಗಿ, ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಭದ್ರತೆ ವಹಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣವಾದ ಮೆಜೆಸ್ಟಿಕ್ನಲ್ಲಿ ಹೊಸದಾಗಿ 39 ಸಿಸಿ ಟಿವಿಗಳನ್ನು ಅಳವಡಿಸಿ ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಹಾಗೂ ಭದ್ರತೆಗೆ ನಿಗಮ ಮುಂದಾಗಿದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆಕೆಎಸ್ಆರ್ಟಿಸಿ ಮೆಜೆಸ್ಟಿಕ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಅವರು ಮಾತನಾಡಿ, ಮೆಜೆಸ್ಟಿಕ್ನಿಂದ ಪ್ರತಿದಿನ ಸುಮಾರು 1700-1800 ಬಸ್ಗಳು ನಾನಾ ಜಿಲ್ಲೆ ಹಾಗೂ ಅಂತಾರಾಜ್ಯಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದು, 25-26 ಸಾವಿರ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ. ಅವರ ಸುರಕ್ಷತೆ ದೃಷ್ಟಿಯಿಂದ ನಿಗಮದಿಂದ ಹೆಚ್ಚುವರಿ 39 ಸಿಸಿಟಿವಿ ಅಳವಡಿಸಲಾಗಿದೆ. ಅಷ್ಟಲ್ಲದೇ ಪ್ರತಿ ದಿನ ಪಾಳಿಯಲ್ಲಿ 35 ಸಿಬ್ಬಂದಿ ಅವುಗಳನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.