ಕರ್ನಾಟಕ

karnataka

ETV Bharat / city

18ರ ಪೈಕಿ 10 ಸಚಿವರ ಮೇಲಿದೆ ಕ್ರಿಮಿನಲ್ ಕೇಸ್​​, ಅದೇ ಅವರ ಯೋಗ್ಯತೆ ಎಂದು ಟೀಕಿಸಿದ ಉಗ್ರಪ್ಪ - Karnataka political development

ಸಚಿವರಾಗೋದಕ್ಕೆ ಯೋಗ ಮತ್ತು ಯೋಗ್ಯತೆ ಬೇಕು ಎಂದು ಯಡಿಯೂರಪ್ಪ ಹೇಳಿದ್ರು. ಆ ಬಿಜೆಪಿಯ 18 ಸಚಿವರಲ್ಲಿ 10 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿವೆ. ಇದೇ ಅವರ ಯೋಗ್ಯ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ.

10 bjp ministers have criminal case

By

Published : Aug 27, 2019, 8:56 PM IST

ಬೆಂಗಳೂರು:ಬಿಜೆಪಿಯ 18 ಸಚಿವರಲ್ಲಿ 10 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರಾಗೋದಕ್ಕೆ ಯೋಗ ಮತ್ತು ಯೋಗ್ಯತೆ ಬೇಕು ಎಂದು ಯಡಿಯೂರಪ್ಪ ಹೇಳಿದ್ರು. ಚುನಾವಣೆ ಆಯೋಗಕ್ಕೆ ಬಿಜೆಪಿಯವರು ಸಲ್ಲಿಸಿದ ಅಫಿಡವಿಟ್​ ನೋಡಿದಾಗ, ಇದೇ ಅವರ ಯೋಗ್ಯತೆ ಎಂದೆನಿಸುತ್ತದೆ. ಬಿಜೆಪಿಯ ಪ್ರಕಾರ ಯೋಗ್ಯತೆ ಎಂದರೆ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿರುವುದು ಎಂದು ಕಾಣುತ್ತಿದೆ ಎಂದರು.

ಜಗದೀಶ್​​ ಶೆಟ್ಟರ್, ಸಿಟಿ ರವಿ, ಶ್ರೀರಾಮುಲು, ಅಶೋಕ್ ತಾವೇ ಪಕ್ಷವನ್ನು ಕಟ್ಟಿದ್ದು ಅಂತ ಬಿಂಬಿಸಿಕೊಳ್ತಿದ್ರು. ಆದರೀಗ ಕೇವಲ ಸಚಿವರಾಗಲಷ್ಟೇ ಅವರಿಗಿರುವ ಯೋಗ್ಯತೆ ಎಂದು ಪಕ್ಷ ತೋರಿಸಿಕೊಟ್ಟಿದೆ. ಈ ನಾಯಕರಿಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ಕೊಡಬೇಕು. ಇಲ್ಲದೇ ಹೋದರೆ ಜನರೇ ಮುಂದಿನ ದಿನಗಳಲ್ಲಿ ನಿಮಗೆ ಕಪಾಳ ಮೋಕ್ಷ ಮಾಡ್ತಾರೆ ಎಂದು ಟೀಕಿಸಿದ್ದಾರೆ.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ಯಾರ್ಯಾರ ಮೇಲಿದೆ ಕ್ರಿಮಿನಲ್​ ಕೇಸ್:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಾ.ಅಶ್ವತ್ ನಾರಾಯಣ್, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ವಿ.ಸೋಮಣ್ಣ, ಆರ್.ಅಶೋಕ್, ಲಕ್ಷ್ಮಣ ಸವದಿ, ಬಿ.ಶ್ರೀರಾಮುಲು, ಶಶಿಕಲಾ ಜೊಲ್ಲೆ ಹಾಗೂ ಜೆ.ಸಿ.ಮಾಧುಸ್ವಾಮಿ ಅವರ ಮೇಲೆ ಕ್ರಿಮಿನಲ್​​ ಕೇಸ್​ಗಳಿವೆ.

ABOUT THE AUTHOR

...view details