ಬಳ್ಳಾರಿ :ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವವು ಮನೆ ಮುಂದಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೂಡ್ಲಿಗಿಯಲ್ಲಿ ನಡೆದಿದೆ.
ಜಿಲ್ಲೆಯ ಕೂಡ್ಲಿಗಿಯ ಒಂದನೇ ವಾರ್ಡ್ನ ಬಿಎಸ್ಎನ್ಎಲ್ ಕಚೇರಿಯ ನಿವಾಸಿ ಅಂಬರಿ (25) ಮೃತ ಯುವಕ. ಮೂರು ದಿನಗಳ ಹಿಂದೆ ಮದುವೆಗೆಂದು ಹೋದವನು, ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಇಂದು ಮುಂಜಾನೆ ಬೆಳಗಿನ ಜಾವ ಮನೆಯ ಮುಂದೆ ದೊಡ್ಡ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಈತನ ಶವ ಪತ್ತೆಯಾಗಿದೆ.