ಕರ್ನಾಟಕ

karnataka

By

Published : Jun 6, 2020, 8:20 PM IST

ETV Bharat / city

ಬಳ್ಳಾರಿಯಲ್ಲಿ ಇಂದು ಮತ್ತೆ ಮೂವರಿಗೆ ಕೊರೊನಾ: ಜಿಂದಾಲ್‌ ಕಂಪನಿ‌ ಉದ್ಯೋಗಿ ಕುಟುಂಬಸ್ಥರಿಗೆ ಅಂಟಿದ ಮಹಾಮಾರಿ

ಜಿಂದಾಲ್ ಸಂಸ್ಥೆಯ ಉಕ್ಕು ಕಾರ್ಖಾನೆಯ ಸಿಎಂಬಿ ಸೆಂಟರ್​ನಲ್ಲಿ ಕೆಲಸ‌ ಮಾಡುತ್ತಿದ್ದ 42 ವರ್ಷದ ಉದ್ಯೋಗಿಯ ಕುಟುಂಬಸ್ಥರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 38 ವರ್ಷದ ಮಹಿಳೆ, 10 ವರ್ಷದ ಬಾಲಕ, 12 ವರ್ಷದ ಬಾಲಕಿಗೆ ಸೋಂಕು ತಗುಲಿದೆ.

today new three corona case in bellary
ಗಣಿನಾಡಿನಲ್ಲಿ ಇಂದು ಮತ್ತೆ ಮೂವರಿಗೆ ಪಾಸಿಟಿವ್, ಜಿಂದಾಲ್‌ ಕಂಪನಿ‌ ಉದ್ಯೋಗಿಯ ಕುಟುಂಬಸ್ಥರಿಗೆ ಅಂಟಿದ ಮಹಾಮಾರಿ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇಂದು ಹೊಸದಾಗಿ ಮೂರು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.

ಜಿಂದಾಲ್ ಸಂಸ್ಥೆಯ ಉಕ್ಕು ಕಾರ್ಖಾನೆಯ ಸಿಎಂಬಿ ಸೆಂಟರ್​ನಲ್ಲಿ ಕೆಲಸ‌ ಮಾಡುತ್ತಿದ್ದ 42 ವರ್ಷದ ಉದ್ಯೋಗಿಯ ಕುಟುಂಬಸ್ಥರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 38 ವರ್ಷದ ಮಹಿಳೆ, 10 ವರ್ಷದ ಬಾಲಕ, 12 ವರ್ಷದ ಬಾಲಕಿಗೆ ಸೋಂಕು ತಗುಲಿದೆ.

ಇದರೊಂದಿಗೆ ತೋರಣಗಲ್ಲಿನ‌ ಜಿಂದಾಲ್ ಉಕ್ಕು ಕಾರ್ಖಾನೆಯ ಐವರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ. ಇದೀಗ ಕೊರೊನಾ ಪಾಸಿಟಿವ್ ಪತ್ತೆಯಾದ ವ್ಯಕ್ತಿಯು ಯಾವುದೇ ಸಾಂಸ್ಥಿಕ ಅಥವಾ ಹೋಂ ಕ್ವಾರಂಟೈನ್​​ನಲ್ಲಿರಲಿಲ್ಲ. ಮನೆಯಲ್ಲೇ ಇರೋದರಿಂದ ಕುಟುಂಬಸ್ಥರಿಗೂ ವ್ಯಾಪಿಸಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಸೋಂಕಿತರನ್ನ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲಾಡಳಿತ ಅಥವಾ ರಾಜ್ಯ ಸರ್ಕಾರದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಜಿಲ್ಲೆಯಲ್ಲಿ ಈವರೆಗೂ 43 ಮಂದಿ ಗುಣಮುಖರಾಗಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಉಳಿದ 13 ಮಂದಿಗೆ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details