ಕರ್ನಾಟಕ

karnataka

ETV Bharat / city

ಕದ್ದ ಬೆಳ್ಳಿ ಆಭರಣ ಮಾರುವ ವೇಳೆ ಸಿಕ್ಕಬಿದ್ದ ಕಳ್ಳರು! - Silver jewelry theft

ಮನೆಯೊಂದರ ಬೀಗ ಮುರಿದು 28 ಸಾವಿರ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿದ್ದ ಖದೀಮರನ್ನು ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

Silver jewelry theft
ಕದ್ದ ಬೆಳ್ಳಿ ಆಭರಣಗಳನ್ನು ಮಾರುವ ವೇಳೆ ಸಿಕ್ಕಬಿದ್ದ ಕಳ್ಳರು

By

Published : Jul 19, 2021, 10:00 AM IST

ಹೊಸಪೇಟೆ (ವಿಜಯನಗರ):ಮನೆಯೊಂದರ ಬೀಗ ಮುರಿದು ಬೆಳ್ಳಿ ಆಭರಣಗಳನ್ನು ದೋಚಿದ್ದ ಖದೀಮರು ಮಾರಲು ತೆರಳಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.

ಹೊಸಪೇಟೆನಗರದ ಆನಂದ (28), ಬಿ.ಗೋವಿಂದ (33) ಬಂಧಿತರು. ನಗರದ ಕೌಲ್ ಪೇಟೆಯ ಮಟನ್ ಮಾರುಕಟ್ಟೆ ಓಣಿಯ ದಾದಾ ಖಲಂದರ್ ಎಂಬುವವರ ಮನೆಯಲ್ಲಿದ್ದ 28 ಸಾವಿರ ಮೌಲ್ಯದ ಬೆಳ್ಳಿಯ ಆಭರಣಗಳು ಕಳುವಾಗಿದ್ದವು. ಈ ಕುರಿತು ಜುಲೈ 17ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪತ್ತೆಗಾಗಿ ಪಟ್ಟಣ ಠಾಣೆಯ ಪಿಐ ಎಂ.ಶ್ರೀನಿವಾಸ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.

ಪ್ರಕರಣದ ಬೆನ್ನತ್ತಿದ್ದ ಈ ತಂಡ, ನಗರದ ರಾಮ ಟಾಕೀಸ್ ವೃತ್ತದ ಬಳಿ ಬೆಳ್ಳಿ ಆಭರಣಗಳನ್ನು ಮಾರಲು ಯತ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಬ್ಬಿಣದ ರಾಡ್​ಗಳು ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ‌.

ಇದನ್ನೂ ಓದಿ:Viral ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ : ನಳಿನ್ ಕುಮಾರ್ ಕಟೀಲ್

ABOUT THE AUTHOR

...view details