ಕರ್ನಾಟಕ

karnataka

ETV Bharat / city

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಸ್ವಯಂ ಪ್ರೇರಿತ ಬಂದ್​ಗೆ ಕರೆ ನೀಡಿದ ಶ್ರೀರಾಮಸೇನೆ - ಹೊಸಪೇಟೆ ಬಂದ್​ಗೆ ಕರೆ ನೀಡಿದ ಶ್ರೀರಾಮಸೇನೆ

ಇದೇ ಶನಿವಾರದಂದು ಹೊಸಪೇಟೆ ಸ್ವಯಂ ಪ್ರೇರಿತ ಬಂದ್​ಗೆ ಕರೆ ನೀಡಿರುವ ಶ್ರೀರಾಮಸೇನೆ ರಾಷ್ಟ್ರಪತಿಗಳಿಗೆ ಕನ್ಹಯ್ಯ ಲಾಲ್​ ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ.

srirama sene
ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಸ್ವಯಂ ಪ್ರೇರಿತ ಬಂದ್​ಗೆ ಕರೆ ನೀಡಿದ ಶ್ರೀರಾಮಸೇನೆ

By

Published : Jul 1, 2022, 1:19 PM IST

ವಿಜಯನಗರ:ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಶ್ರೀರಾಮಸೇನೆಯಿಂದ ಶನಿವಾರ ಕಾರ್ಯಕರ್ತರು ಹೊಸಪೇಟೆ ಬಂದ್​ಗೆ ಕರೆ ನೀಡಿದ್ದಾರೆ. ಸ್ವಯಂ ಪ್ರೇರಿತ ಬಂದ್​ಗೆ ಕರೆ ನೀಡಿರೋ ಶ್ರೀರಾಮಸೇನೆ, ಕನ್ಹಯ್ಯ ಲಾಲ್ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಶ್ರೀರಾಮಸೇನಾ ಕಾರ್ಯಕರ್ತ ಜಗದೀಶ್ ಕಮಟಗಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಜಗದೀಶ್​ ಕಮಟಗಿ ವಿಜಯನಗರ ಜಿಲ್ಲೆ ಬಂದ್​ಗೆ ವಿವಿಧ ಕನ್ನಡಪರ ಸಂಘಟನೆಗಳನ್ನು ಸಂಪರ್ಕ ಮಾಡುತ್ತಿದ್ದೇವೆ. ಕೆಲವು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಪ್ರತಿಭಟನಾ ಮೆರವಣಿಗೆಯನ್ನ ಹೊಸಪೇಟೆ ನಗರದ ಆಂಜನೇಯ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಸಲಾಗುತ್ತೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆ ಬಳಿಕ ಕನ್ಹಯ್ಯ ಲಾಲ್ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತೇವೆ. ಜೊತೆಗೆ ದೇಶದಲ್ಲಿ ಅಮಾಯಕ ಹಿಂದೂಗಳ ಕೊಲೆ ನಿರಂತರವಾಗಿ ನಡೆಯುತ್ತಲೇ ಇದೆ. ಕೊಲೆಗಡುಕರಿಗೆ ನಿರ್ದಾಕ್ಷಿಣ್ಯ ಕ್ರಮ ಅಥವಾ ಗಲ್ಲು ಶಿಕ್ಷೆಗೆ ಒತ್ತಾಯಿಸಬೇಕು. ದೇಶದಲ್ಲಿ ಇದುವರೆಗೆ 36 ಮಂದಿ ಹಿಂದೂಗಳ ಕೊಲೆ ನಡೆದಿದೆ.

ಕೊಲೆಯಾದ ಕನ್ಹಯ್ಯ ಲಾಲ್ ಯಾವುದೇ ಸಂಘಟನೆಗೆ ಸೇರಿದವರಲ್ಲ. ದೇಶದಲ್ಲಿ ಅಮಾಯಕ ಹಿಂದೂಗಳ ಕೊಲೆ ನಡೆಯುತ್ತಿದೆ. ಇದು ಆಗಬಾರದು. ಅಷ್ಟೇ ಅಲ್ಲದೇ ಹತ್ಯೆಯ ತನಿಖೆಯನ್ನ ತಿಂಗಳುಗಟ್ಟಲೆ ನಡೆಯಲು ಬಿಡಬೇಡಿ. ಕೊಲೆ ಮಾಡಿದವರೇ ನಾವೇ ಕೊಲೆ ಮಾಡಿದ್ದೇವೆ ಅಂತ ಒಪ್ಪಿಕೊಂಡಿದ್ದಾರೆ.

ಪ್ರಕರಣ ತನಿಖೆ ಮಂದಗತಿಯಲ್ಲಿ ನಡೆದರೆ ಬೇಲ್ ಮೂಲಕ ಹೊರಬರುತ್ತಾರೆ. ಇದು ಮುಂದುವರಿದರೆ ದೇಶದಲ್ಲಿ ಕೊಲೆಗಳು ನಿರಂತರವಾಗಿ ನಡೆಯುತ್ತವೆ. ಇದನ್ನ ಈಗಿಂದಲೇ ಹದ್ದುಬಸ್ತಿನಲ್ಲಿಡಬೇಕು ಅಂತ ಶ್ರೀರಾಮ ಸೇನೆ ಕಾರ್ಯಕರ್ತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪ್ರತಿಭಟನಾ ಮೆರವಣಿಗೆ ದಿನ ಶ್ರೀರಾಮ ಸೇನಾ ಪ್ರ. ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ, ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ್ ಮರಡಿ ಭಾಗಿಯಾಗೋ ಸಾಧ್ಯತೆ ಇದೆ.

ಇದನ್ನೂ ಓದಿ:ಉದಯಪುರ ಯುವಕನ ಹತ್ಯೆ ಹಿಂದೆ ಬೋಧನೆ ಪ್ರಭಾವ ಇದೆ: ಮುತಾಲಿಕ್ ಆರೋಪ

ABOUT THE AUTHOR

...view details