ಕರ್ನಾಟಕ

karnataka

ETV Bharat / city

ಸಿರಿಗೇರಿ ಗ್ರಾಮ ಪಂಚಾಯತ್​ ಮೇಲ್ದರ್ಜೆಗೇರಿಸುವಂತೆ ಗ್ರಾಮಸ್ಥರ ಒತ್ತಾಯ - Sirigeri Gram Panchayat

ಸಿರಿಗೇರಿ ಗ್ರಾಮ ಪಂಚಾಯತ್​ ಅನ್ನು ಪಟ್ಟಣ ಪಂಚಾಯತ್​ ಆಗಿ ಮೇಲ್ದರ್ಜೆಗೇರಿಸಬೇಕು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಗಮನಹರಿಸದಿದ್ದರೆ ಗ್ರಾಮ ಪಂಚಾಯತ್​ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸಿರಿಗೇರಿ ಗ್ರಾಮಸ್ಥರ ನಿಯೋಗ
ಸಿರಿಗೇರಿ ಗ್ರಾಮಸ್ಥರ ನಿಯೋಗ

By

Published : Dec 11, 2020, 1:20 PM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮ ಪಂಚಾಯತ್​ ಅನ್ನು ಪಟ್ಟಣ ಪಂಚಾಯತ್​ ಆಗಿ ಮೇಲ್ದರ್ಜೆಗೇರಿಸಬೇಕು. ಇಲ್ಲದಿದ್ದರೆ ಈ ಬಾರಿ ಗ್ರಾಮ ಪಂಚಾಯತ್​ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

28 ಮಂದಿ ಗ್ರಾಮ ಪಂಚಾಯತ್​ ಸದಸ್ಯರನ್ನು ಹೊಂದಿರುವ ಸಿರಿಗೇರಿ ಗ್ರಾಮ ಪಂಚಾಯತ್​ ತಾಲೂಕಿಗೆ ಅತಿ ದೊಡ್ಡ ಪಂಚಾಯತ್​ ಆಗಿ ಹೊರಹೊಮ್ಮಿದೆ.‌ ಹೀಗಾಗಿ ಪಟ್ಟಣ ಪಂಚಾಯತ್​ ಆಗಿ ಮೇಲ್ದರ್ಜೆಗೇರಿಸಬೇಕು. ಇಲ್ಲದಿದ್ದರೆ ಗ್ರಾಮ‌ ಪಂಚಾಯತ್​ ಚುನಾವಣೆಗೆ ನಾಮಪತ್ರ ಸಲ್ಲಿಸಲು ಯಾರೂ ಮುಂದಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಗ್ರಾಮಸ್ಥರ ಮನವೊಲಿಕೆಗೆ ಜಿಲ್ಲಾಡಳಿತ ಹಾಗೂ ತಾಲೂಕು​ ಆಡಳಿತ ಮುಂದಾಗಿದೆ. ಜೊತೆಗೆ ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ಮಧ್ಯೆ ಪ್ರವೇಶಿಸಿ ಸಿರಿಗೇರಿ ಗ್ರಾಮಸ್ಥರ ನಿಯೋಗವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ.ಸೋಮಣ್ಣನವರ ಬಳಿ ಕೊಂಡೊಯ್ದು, ಗ್ರಾಮಸ್ಥರ ಬೇಡಿಕೆ ಕುರಿತಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ.‌ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಮೂಲಗಳು ತಿಳಿಸಿವೆ.

ABOUT THE AUTHOR

...view details