ಹೊಸಪೇಟೆ:ದುಡ್ಡುಕೊಟ್ಟು ಮತ ಪಡೆಯುವವರಿಗೆ ಜನರ ಸಮಸ್ಯೆಗಳು ಅರಿವಾಗುವುದಿಲ್ಲ. ಅಂಥವರ ವಿರುದ್ಧ ವಿಜಯನಗರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎನ್.ನಬಿ ಹೇಳಿದರು.
ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆ: ಮಾಜಿ ಶಾಸಕ - ದುಡ್ಡುಕೊಟ್ಟು ಮತ
ದುಡ್ಡುಕೊಟ್ಟು ಮತ ಪಡೆಯುವವರಿಗೆ ಜನರ ಸಮಸ್ಯೆಗಳು ಅರಿವಾಗುವುದಿಲ್ಲ, ಅಂಥವರ ವಿರುದ್ಧ ಸ್ಪರ್ಧಿಸಲು ಹೆದರಿಕೆಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎನ್.ನಬಿ ಹೇಳಿದರು.
![ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆ: ಮಾಜಿ ಶಾಸಕ](https://etvbharatimages.akamaized.net/etvbharat/prod-images/768-512-5004792-thumbnail-3x2-ttt.jpg)
Vijayanagar constituency by-election
ರೈನ್ಬೋ ಭವನದಲ್ಲಿ ನಡೆದ ಜೆಡಿಎಸ್ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತಗಳನ್ನು ದುಡ್ಡಿಗೆ ಮಾರಾಟ ಮಾಡಿಕೊಳ್ಳಬೇಡಿ. ನಿಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವವರಿಗೆ ಹಾಕಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಂ.ಎನ್.ನಬಿ
ನಾವು-ನೀವೆಲ್ಲಾ ಅರಮನೆಯಲ್ಲಿ ಬೆಳೆದವರಲ್ಲ. ಸರಳ ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ಹೊಸಪೇಟೆ ಅಭಿವೃದ್ಧಿಗೆ ಹಾಗೂ ಜನರ ಸೇವೆ ಸಲ್ಲಿಸಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.