ಬಳ್ಳಾರಿ:ಗಣಿನಾಡು ಬಳ್ಳಾರಿಯ ಬೆಳಗಲ್ ಕ್ರಾಸ್ನಿಂದ ಹಿಡಿದು ಬೈ ಪಾಸ್ ರಸ್ತೆವರೆಗೂ ಒಂದೂ ಬೀದಿ ದೀಪಗಳು ಇಲ್ಲದೆ ಕತ್ತಲಿನಲ್ಲೇ ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದ್ದು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೀದಿ ದೀಪಗಳೇ ಇಲ್ಲದ ರಸ್ತೆಗಳು: ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ಸಾರ್ವಜನಿಕರು - ಸೆಕ್ಯೂರಿಟಿ ಗಾರ್ಡ್ ಸುಭಾಷ್
ಗಣಿನಾಡು ಬಳ್ಳಾರಿಯ ಬೆಳಗಲ್ ಕ್ರಾಸ್ನಿಂದ ಹಿಡಿದು ಬೈ ಪಾಸ್ ರಸ್ತೆವರೆಗೂ ಒಂದೂ ಬೀದಿ ದೀಪಗಳು ಇಲ್ಲದೆ ಕತ್ತಲಿನಲ್ಲೇ ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದ್ದು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೀದಿ ದೀಪಗಳೇ ಇಲ್ಲದ ರಸ್ತೆಗಳು: ಅಧಿಕಾರಿಗಳಿಗೆ ಇಡಿಶಾಪ ಹಾಕಿದ ಸಾರ್ವಜನಿಕರು
ಗ್ರಾಮಾಂತರ ಪ್ರದೇಶದ ಗೌತಮ್ ನಗರ, ಪ್ರಶಾಂತ ನಗರ, ಹಿಂದುಳಿದ ವರ್ಗಗಳ ಹಾಸ್ಟೆಲ್, ಆಕಾಶವಾಣಿ ಮತ್ತು ವಿಶ್ವವಿದ್ಯಾಲಯ ವಸತಿ ಗೃಹದ ಮುಂಭಾಗದ ರಸ್ತೆಯಲ್ಲಿ ಒಂದೇ ಒಂದು ಬೀದಿ ದೀಪ ಇಲ್ಲದೇ ಸಾರ್ವಜನಿಕರು ಮತ್ತು ಹಾಸ್ಟೆಲ್ನಲ್ಲಿರುವ ಮಕ್ಕಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಈ ವಿಷಯವಾಗಿ ಈಟಿವಿ ಭಾರತ ಜತೆ ಮಾತನಾಡಿರುವ ಸೆಕ್ಯೂರಿಟಿ ಗಾರ್ಡ್, ಸುಭಾಷ್ ರಾತ್ರಿ ಸಮಯದಲ್ಲಿ ಡ್ಯೂಟಿಗೆ ಬರಬೇಕಾದ್ರೇ ಬಹಳ ಕತ್ತಲು ಇರುತ್ತೇ, ಒಂದೇ ಒಂದು ಬೀದಿ ದೀಪವಿಲ್ಲ, ಸಂಭಂದ ಪಟ್ಟ ಅಧಿಕಾರಿಗಳು ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿದೆ ಎಂದು ಮನವಿ ಮಾಡಿಕೊಂಡರು.