ಬಳ್ಳಾರಿ:ನಾಲ್ಕನೇ ಹಂತದ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ ಜಿಲ್ಲೆಯಲ್ಲಿ ಇಷ್ಟು ದಿನ ಎಣ್ಣೆ ಖರೀದಿಗೆ ಭಾರಿ ಕ್ಯೂ ನಿಂತಿದ್ದ ಗ್ರಾಹಕರು ಈಗ ತಂಬಾಕು ಖರೀದಿಗೂ ಅಂಗಡಿಗಳ ಬಳಿ ಜಮಾಯಿಸುತ್ತಿದ್ದಾರೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ತಂಬಾಕು ಉತ್ಪನ್ನ ಮಾರುವ ಅಂಗಡಿಗಳ ಮುಂದೆ ಜನರು ನಿಂತಿದ್ದ ದೃಶ್ಯ ಕಂಡುಬಂದಿದೆ. ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತ ನೂರಾರು ಮಂದಿ ಗುಟ್ಕಾ ಖರೀದಿಸುತ್ತಿದ್ದರು. ಒಬ್ಬರಿಗೆ 2 ಪ್ಯಾಕೆಟ್ ಮಾತ್ರ ವಿತರಿಸಲಾಗುತ್ತಿದ್ದು, ಒಂದು ಪ್ಯಾಕೆಟ್ ಗೆ ರೂ.125 ರಂತೆ ಮಾರಾಟ ಮಾಡಲಾಗುತ್ತಿದೆ.