ಕರ್ನಾಟಕ

karnataka

ETV Bharat / city

ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಪೋಷಕರೇ ವಿಲನ್: ಜೀವ ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ದಂಪತಿ - Love case

ಕಳೆದ 4 ವರ್ಷದಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದ ಪ್ರೇಮಿಗಳಿಬ್ಬರು ಪೋಷಕರ ವಿರೋಧದ ನಡುವೆಯೂ ಮದುವೆಯಾಗಿ ಇದೀಗ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ಜೀವ ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ದಂಪತಿ
ಜೀವ ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ದಂಪತಿ

By

Published : Jun 10, 2022, 6:56 AM IST

ಬಳ್ಳಾರಿ: ಇದು ಪ್ರೇಮಿಗಳಿಬ್ಬರ ಸಂಕಷ್ಟದ ಕತೆ. ಅವರಿಬ್ಬರು ಕಳೆದ 4 ವರ್ಷದಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಮೇಲಾಗಿ ಒಂದೇ ಕಾಲೇಜಿ​ನಲ್ಲಿ ಉನ್ನತ ವ್ಯಾಸಂಗ ಮಾಡಿದವರು. ‌ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ದಾರೆ. ಆದರೆ, ಈ ಪ್ರೇಮಿಗಳಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ಯುವತಿಯ ಪೋಷಕರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ಜೀವ ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ದಂಪತಿ

ವಿಜಯನಗರ ಜಿಲ್ಲೆಯ ಹೊಸಪೇಟೆಯ 28ನೇ ವಾರ್ಡ್​ನ ಚಪ್ಪರದಳ್ಳಿ ನಿವಾಸಿ ವಿ ಪಿ ಸೌಮ್ಯಾ ಎನ್ನುವರು ಬಳ್ಳಾರಿಯ ಕುಂಬಾರ ಓಣಿಯ ನಿವಾಸಿಯಾದ ಶರತ್​ನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರೂ ಬಳ್ಳಾರಿಯ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ಪದವಿ ಮುಗಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಸ್ನೇಹಿತರಾಗಿದ್ದು, ಇದೇ ತಿಂಗಳ 3 ರಂದು ಬಳ್ಳಾರಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಆದರೆ, ಇವರಿಬ್ಬರ ಮದುವೆಗೆ ಜಾತಿ, ಅಂತಸ್ತು ಅಡ್ಡ ಬಂದಿದ್ದು, ಯುವತಿಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಯುವತಿಯ ಮನೆಯವರು ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದಾರೆ. ಆದರೆ, ಇಬ್ಬರು ವಿದ್ಯಾವಂತರು ಮೇಲಾಗಿ ಇಬ್ಬರು ಮೇಜರ್. ಹೀಗಾಗಿ, ನಾನು ಇಷ್ಟ ಪಟ್ಟ ಯುವಕನ ಜೊತೆ ಬದಕುತ್ತೇನೆ. ನಮನ್ನು ಬದುಕಲು ಬಿಡಿ ಎಂದು ಯುವತಿ ಕಣ್ಣೀರು ಹಾಕುತ್ತಾ ತಂದೆ ತಾಯಿಗಳಿಗೆ‌ ಮನವಿ ಮಾಡಿದ್ದಾಳೆ.

ಇನ್ನು ಶರತ್ ಈಗಾಗಲೇ ಹೈದರಾಬಾದ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ, ಯುವತಿ ಮನೆಯಲ್ಲಿ ಹುಡುಗನಿಗೆ ಕೊಲೆ ಬೆದರಿಕೆ ಹಾಕುತಿದ್ದಾರೆ. ಮೇಲಾಗಿ ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ನೀಡಿದ್ದಾರೆ. ಹೀಗಾಗಿ, ಯುವತಿ ಪೋಷಕರ ಪ್ರಾಣ ಭಯದಿಂದ ರಕ್ಷಣೆ ಕೋರಿ ಪ್ರೇಮಿಗಳು ಪೋಲಿಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ನಟ ಸಲ್ಮಾನ್​​ ಖಾನ್‌ಗೆ ಜೀವ ಬೆದರಿಕೆ ಪತ್ರ ಬರೆದಿದ್ದು ಗ್ಯಾಂಗ್​ಸ್ಟರ್​​ ಬಿಷ್ಣೋಯಿ ಆಪ್ತ

ABOUT THE AUTHOR

...view details