ಕರ್ನಾಟಕ

karnataka

ETV Bharat / city

ತುಂಗಭದ್ರಾ ಜಲಾಶಯಕ್ಕೆ ಕೆಎಸ್​​​​​​ಐಎಸ್​ಎಫ್ ಭದ್ರತೆ - ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ

ಈ ಮೊದಲು ತುಂಗಭದ್ರಾ ಜಲಾಶಯದ ಎಡದಂಡೆ, ಬಲದಂಡೆ ಸೇರಿದಂತೆ ಹಲವು ಕಡೆ ಡಿಆರ್, ಸಿವಿಲ್, ಖಾಸಗಿ ಭದ್ರತಾ ಸಿಬ್ಬಂದಿಗೆ ಭದ್ರತೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ಈಗ ಕೆಎಸ್​​​​​​ಐಎಸ್​ಎಫ್ ಭದ್ರತೆ ನೀಡಲಿದೆ.

Tungabhadra Reservoir
ತುಂಗಭದ್ರಾ ಜಲಾಶಯಕ್ಕೆ ಕೆಎಸ್​​​​​​ಐಎಸ್​ಎಫ್ ಭದ್ರತೆ ನಿಯೋಜನೆ

By

Published : Jun 18, 2021, 6:52 AM IST

ಹೊಸಪೇಟೆ:ತುಂಗಭದ್ರಾ ಜಲಾಶಯ ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶದ ರೈತರ ಜೀವನಾಡಿಯಾಗಿದೆ. ಜಲಾಶಯಕ್ಕೆ ಭದ್ರತೆ ಹೆಚ್ಚಿಸಲು ಆಡಳಿತ ಮಂಡಳಿಕ್ರಮ ಕೈಗೊಂಡಿದ್ದು, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ (ಕೆಎಸ್​​​​​​ಐಎಸ್​ಎಫ್) ಭದ್ರತೆ ಜವಾಬ್ದಾರಿ ವಹಿಸಲಾಗಿದೆ.

ತುಂಗಭದ್ರಾ ಜಲಾಶಯಕ್ಕೆ ಕೆಎಸ್​​​​​​ಐಎಸ್​ಎಫ್ ಭದ್ರತೆ

ಈ ಮೊದಲು ತುಂಗಭದ್ರಾ ಎಡದಂಡೆ, ಬಲದಂಡೆ ಸೇರಿದಂತೆ ಹಲವು ಕಡೆ ಡಿಆರ್, ಸಿವಿಲ್, ಖಾಸಗಿ ಭದ್ರತಾ ಸಿಬ್ಬಂದಿಗೆ ಭದ್ರತೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ಈಗ ಕೆಎಸ್​​​​​​ಐಎಸ್​ಎಫ್ ಭದ್ರತೆ ನೀಡಲಿದೆ. ಜಲಾಶಯಕ್ಕೆ ಕೆಎಸ್​​​​​​ಐಎಸ್​ಎಫ್ ಭದ್ರತೆ ಒದಗಿಸುವಂತೆ ತುಂಗಭದ್ರಾ ಆಡಳಿತ ಮಂಡಳಿ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಹೀಗಾಗಿ ಸರ್ಕಾರ ಮೊದಲ ಹಂತದಲ್ಲಿ 23 ಭದ್ರತಾ ಪೊಲೀಸರನ್ನು ನಿಯೋಜಿಸಿದೆ. ಎರಡನೇ ಹಂತದಲ್ಲಿ 20 ಸಿಬ್ಬಂದಿ ನಿಯೋಜನೆಗೊಳ್ಳಲಿದ್ದಾರೆ.

ಭದ್ರತೆಗೆ ಒತ್ತು:ಕೆಎಸ್​​​​​​ಐಎಸ್​ಎಫ್ ಭದ್ರತಾ ಸಿಬ್ಬಂದಿ ಕೈಯಲ್ಲಿ ಬಂದೂಕು ಇರಲಿದೆ. ಇದರಿಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ತಪ್ಪಲಿದೆ.‌ ಈ ಮುಂಚೆ ಭದ್ರತಾ ಸಿಬ್ಬಂದಿ ಕೈಯಲ್ಲಿ ಲಾಠಿ ಮಾತ್ರ ಇರುತ್ತಿತ್ತು. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಉದಾಹರಣೆಗಳಿವೆ. ಇದೀಗ ಕೆಎಸ್​​​​​​ಐಎಸ್​ಎಫ್ ಭದ್ರತೆ ಪಡೆಗೆ ಸಂಪೂರ್ಣ ಅಧಿಕಾರ ನೀಡಿದ್ದು, ಹಲ್ಲೆ ಮಾಡಿದವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಬಹುದುದಾಗಿದೆ.

ಡ್ಯಾಂ ಪ್ರವೇಶಕ್ಕೆ ಅನುಮತಿ ಕಡ್ಡಾಯ: ಈ ಮುಂಚೆ ಖಾಸಗಿ ವಾಹನಗಳು ಡ್ಯಾಂ ಪ್ರವೇಶವನ್ನು ಸುಲಭವಾಗಿ ಪಡೆಯಬಹುದಿತ್ತು. ಸಿಬ್ಬಂದಿ ಮೇಲೆ ರಾಜಕೀಯ ಸೇರಿದಂತೆ ಇನ್ನಿತರ ಗಣ್ಯರ ಒತ್ತಡ ಇರುತ್ತಿತ್ತು. ಆದರೆ, ಈಗ ಡ್ಯಾಂ ಪ್ರವೇಶವನ್ನು ಪಡೆಯಬೇಕಾದರೆ ಕೆಎಸ್​​​​​​ಐಎಸ್​ಎಫ್ ಮುಖ್ಯಸ್ಥರ ಅನುಮತಿ ಕಡ್ಡಾಯಗೊಳಿಸಲಾಗಿದೆ.

ಈ ಕುರಿತು ಈಟಿವಿ ಭಾರದೊಂದಿಗೆ ಮಾತನಾಡಿದ ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ನಾಗಮೋಹನ, ಹೆಚ್ಚಿನ ಭದ್ರತೆ ದೃಷ್ಟಿಯಿಂದ ಕೆಎಸ್​​​​​​ಐಎಸ್​ಎಫ್ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಏಪ್ರಿಲ್​ ತಿಂಗಳಿನಿಂದ ಕೆಎಸ್​​​​​​ಐಎಸ್​ಎಫ್ ಸಿಬ್ಬಂದಿ ನೀಡಿದೆ. ಈಗ ಜನಪ್ರತಿನಿಧಿಗಳ ಒತ್ತಡಕ್ಕೆ ವಾಹನಗಳನ್ನು ಬಿಡುವಂತಿಲ್ಲ. ಕೆಎಸ್​​​​​​ಐಎಸ್​ಎಫ್ ಮುಖ್ಯಸ್ಥರ ಅನುಮತಿ ಕಡ್ಡಾಯವಾಗಿ ಬೇಕು. ಕಾಲುವೆ ದಂಡೆಯ ಮೇಲೆ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಆರ್ಥಿಕ ಬಿಕ್ಕಟ್ಟು: ಇಲಾಖೆಗಳು ವಿಲೀನ, ಹುದ್ದೆ ಕಡಿತಕ್ಕೆ ಮುಂದಾದ ರಾಜ್ಯ ಸರ್ಕಾರ!


ABOUT THE AUTHOR

...view details