ಕರ್ನಾಟಕ

karnataka

ಟ್ರಾಫಿಕ್​ ಪೊಲೀಸ್​ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ

ರಸ್ತೆ ಮಧ್ಯೆ ಆಟೋ ನಿಲ್ಲಿಸಿ ಟ್ರಾಫಿಕ್ ಜಾಮ್​ ಕಾರಣವಾಗಿದ್ದ ಆಟೋ ಚಾಲಕನಿಗೆ ತೆರವುಗೊಳಿಸುವಂತೆ ಸಂಚಾರ ಪೊಲೀಸ್​ ಹೇಳಿದಕ್ಕೆ ಅವರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

By

Published : May 14, 2022, 5:37 PM IST

Published : May 14, 2022, 5:37 PM IST

Insulting traffic police with obscene noises in Ballari
ಟ್ರಾಫಿಕ್​ ಪೊಲೀಸ್​ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ

ಬಳ್ಳಾರಿ:ನಡು ರಸ್ತೆಯಲ್ಲಿಯೇ ಪೊಲೀಸ್‌ ಹಾಗೂ ಆಟೋ ಚಾಲಕ ನಡುವೆ ಜಗಳ ನಡೆದು ಆಟೋ ಚಾಲಕ ಟ್ರಾಫಿಕ್ ಪೊಲೀಸ್​ಗೆ ಹೊಡೆದ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ನಗರದ ದುರ್ಗಮ್ಮ ಸರ್ಕಲ್​ನ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್​ಗೆ ದಾರಿ ಬಿಡದೇ ಅನಗತ್ಯವಾಗಿ ಆಟೋ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡಿದ್ದನ್ನು ಗಮನಿಸಿದ ಸಂಚಾರ ಪೊಲೀಸ್ ಬಸ್ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಅದಕ್ಕೆ ಕ್ಯಾರೇ ಎನ್ನದ ಆಟೋ ಚಾಲಕ, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ.

ಸ್ಥಳದಲ್ಲಿ ಸಂಚಾರ ಎಎಸ್‌ಐ ಬುದ್ಧಿವಾದ ಹೇಳುತ್ತಿದ್ದರೂ ಆಟೋ ಚಾಲಕ ಕಪ್ಪಗಲ್ ರಸ್ತೆಯ ನಿವಾಸಿ ರಾಮಕೃಷ್ಣ(47) ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಂಚಾರಿ ಪೊಲೀಸ್ ಠಾಣೆಯ ಎಎಸ್​ಐ ಗೋಪಾಲಕೃಷ್ಣ ಮೇಲೆ ಹಲ್ಲೆ ಮಾಡಿದ್ದಾರೆ. ತಕ್ಷಣ ಅಲ್ಲಿದ್ದ ಪೊಲೀಸರೆಲ್ಲ ಸೇರಿ ನಂತರ ಆಟೋ ಚಾಲಕನಿಗೆ ಕಪಾಳಕ್ಕೆ ಹೊಡೆದು ಗಾಂಧಿನಗರ ಠಾಣೆಗೆ ಒಪ್ಪಿಸಿದರು.

ಈ ವೇಳೆ ಎಎಸ್ಐ ಗೋಪಾಲಕೃಷ್ಣ ಅವರ ಕೈ ಪೆಟ್ಟಾಗಿದೆ. ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಡ್ರೈವರ್​ಗೆ ಫಿಟ್ಸ್ ಬಂದು ಟಿಟಿ ಪಲ್ಟಿ: 10 ಜನ ಪ್ರವಾಸಿಗರಿಗೆ ಗಾಯ

For All Latest Updates

ABOUT THE AUTHOR

...view details