ಕರ್ನಾಟಕ

karnataka

ETV Bharat / city

ಜಮೀನಿಗೆ ನುಗ್ಗಿದ ನೀರು: ಅಪಾರ ಪ್ರಮಾಣ ಬೆಳೆ ನಷ್ಟ, ಪರಿಹಾರಕ್ಕೆ ರೈತರ ಆಗ್ರಹ - ನೆರ ಭೀತಿ

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿರುಗುಪ್ಪ ತಾಲೂಕಿನ ನಾಡಂಗ್ ಗ್ರಾಮದಲ್ಲಿ ಗರ್ಜಿ ಹಳ್ಳ ತುಂಬಿ ಹರಿಯುತ್ತಿದ್ದು, ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

heavy-rain-in-ballary

By

Published : Oct 12, 2019, 9:48 PM IST

ಬಳ್ಳಾರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿರುಗುಪ್ಪ ತಾಲೂಕಿನ ನಾಡಂಗ್ ಗ್ರಾಮದಲ್ಲಿ ಗರ್ಜಿ ಹಳ್ಳ ತುಂಬಿ ರೈತರ ಜಮೀನಿನ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಜಮೀನಿನಲ್ಲಿ ನಿಂತ ನೀರು

25 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಒಂದು ಎಕರೆ ಮೆಣಸಿನಕಾಯಿಗೆ ₹ 30 ಸಾವಿರ, ಹತ್ತಿ ಬೆಳೆಗೆ ಎಕರೆಗೆ ₹ 18 ಸಾವಿರ, ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ₹ 2 ಸಾವಿರ ರೈತ ಖರ್ಚು ಮಾಡಿದ್ದಾನೆ. ಆದರೆ, ಮಳೆಯಿಂದಾಗಿ ಸಂಪೂರ್ಣ ನಷ್ಟವಾಗಿದೆ. ಅದಕ್ಕೆ ತಕ್ಕ ಪರಿಹಾರವನ್ನು ಸರ್ಕಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ ರೈತರು ತಮ್ಮ ಬೆಳೆಗಳು ಮಳೆಯಿಂದಾಗಿ ಹಾಳಾಗಿವೆ. ವೈಜ್ಞಾನಿಕ ಅಧ್ಯಯನ ಮಾಡಿ ಸರಿಯಾದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ABOUT THE AUTHOR

...view details