ಕರ್ನಾಟಕ

karnataka

ETV Bharat / city

ಬರಡು ಭೂಮಿಯಲ್ಲಿ ಬಂಗಾರದ ಬೆಳೆ... ಪದವೀಧರ ರೈತನ ಕೈಹಿಡಿದ ಜಾಮ​ಕಾಯಿ! - ಎಂಜಿನಿಯರಿಂಗ್ ಪದವೀಧರ ರೈತ ಮತ್ತೊಬ್ಬರಿಗೆ ಮಾದರಿ

ಗಣಿನಾಡಿನಲ್ಲಿ ರಾಯಪುರ ಮೂಲದ ತಳಿಯ ಜಾಮಕಾಯಿ(ಪೇರಲ) ಹುಲುಸಾಗಿದೆ ಬೆಳೆದಿದೆ. ಗಣಿನಾಡಿನ ಬರಡು ಭೂಮಿಯಲ್ಲಿ ಬಂಗಾರದ ಬೆಳೆಯನ್ನು ಬೆಳೆಯುವ ಮೂಲಕ ಎಂಜಿನಿಯರಿಂಗ್ ಪದವೀಧರನಾಗಿರುವ ರೈತ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.

KN_BLY_1_JAMKAYA_STY_VSL_7203310
ಬರಡಾದ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ಗಣಿನಾಡಿನ ಪದವೀಧರ ರೈತ...!

By

Published : Mar 17, 2020, 12:17 PM IST

ಬಳ್ಳಾರಿ: ಎಲ್ಲೆಡೆ ಗಣಿಗಾರಿಕೆಯ ಧೂಳು ಕಂಡುಬರುವ ಜಿಲ್ಲೆಯಲ್ಲಿ ರೈತರು ಕೃಷಿಯಲ್ಲಿ ಸಾಧನೆ ಮಾಡುವುದು ಅಪರೂಪ. ಅದೇ ರೀತಿ ರೈತನೋರ್ವ ಬರಡು ಭೂಮಿಯಲ್ಲಿ ಹುಲುಸಾಗಿ ಜಾಮಕಾಯಿ(ಪೇರಲ) ಬೆಳೆದು ಈಗ ಕೈತುಂಬ ಹಣ ಸಂಪಾದಿಸುತ್ತಿದ್ದಾರೆ.

ಹೌದು, ರಾಯಪುರ ಮೂಲದ ತಳಿಯ ಜಾಮಕಾಯಿ ಬೆಳೆಯನ್ನು ಬರಡು ಭೂಮಿಯಲ್ಲೇ ಬೆಳೆಯುವ ಮೂಲಕ ಎಂಜಿನಿಯರಿಂಗ್ ಪದವೀಧರ ರೈತ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.

ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ಗಣಿನಾಡಿನ ರೈತ!

ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳು ಗ್ರಾಮದ ಅಶೋಕ ರೆಡ್ಡಿ, ತಮ್ಮ ಹತ್ತು ಎಕರೆಯ ಹೊಲದಲ್ಲಿ ಸಣ್ಣದೊಂದು ಬೋರ್​ವೆಲ್ ಕೊರೆಯಿಸಿ ಬರಡಾದ ಭೂಮಿಯಲ್ಲಿ ವಿಎನ್​ಆರ್​ ಕಂಪನಿಯ ಕೆ ಜಿ ಜಾಮ ಅನ್ನೋ ತಳಿಯ ಜಾಮಕಾಯಿ ಬೆಳೆಯನ್ನು ಹುಲುಸಾಗಿ ಬೆಳೆದಿರುವುದಾಗಿ ಈಟಿವಿ ಭಾರತಕ್ಕೆ ತಮ್ಮ ಯಶಸ್ವಿ ಕೃಷಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಎಂಜಿನಿಯರಿಂಗ್ ಪದವೀಧರರಾದ ಅಶೋಕ್​ ರೆಡ್ಡಿ, ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಊರಿಂದ ಊರಿಗೆ ವರ್ಗಾವಣೆ ಮಾಡೋದರಿಂದ ಬೇಸತ್ತ ಅವರು ತೋಟಗಾರಿಕೆ ಕೃಷಿಯತ್ತ ವಾಲಿದ್ದಾರೆ. ಆರಂಭದಲ್ಲಿ ನಷ್ಟ ಅನುಭವಿಸಿದರು ಆ ಬಳಿಕ, ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ABOUT THE AUTHOR

...view details