ಕರ್ನಾಟಕ

karnataka

ETV Bharat / city

ಎಸ್ಸಿ-ಎಸ್ಟಿ ಹಾಸ್ಟೇಲ್ ಗಳಿಗೆ ಬೀಗ.. ಮೂಲಸೌಕರ್ಯಕ್ಕೆ ಆಗ್ರಹಿಸಿ ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆ - undefined

ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಶೋಧನಾ ವಿದ್ಯಾರ್ಥಿಗಳು ವಿವಿಯ ಆವರಣದಲ್ಲಿನ ಹಾಸ್ಟೆಲ್ ಗಳಿಗೆ ಬೀಗ ಹಾಕಿ ಅಗತ್ಯ ಮೂಲಭೂತ ಸೌಲಭ್ಯ ನೀಡಬೇಕೆಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ

By

Published : May 5, 2019, 10:54 AM IST

ಬಳ್ಳಾರಿ :ವಿವಿಯಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ವಾರ್ಡನ್ ನೇಮಕ ಮಾಡಬೇಕು ಹಾಗೇ ಗುಣಮಟ್ಟ ಆಹಾರ ನೀಡಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಬೀಗಹಾಕಿ ಪ್ರತಿಭಟನೆ ಮಾಡಿದರು.

ಹಂಪಿಯಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ಎಸ್ಸಿ-ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳ ಹಾಸ್ಟೆಲ್ ಗಳಿಗೆ ಬೀಗ ಹಾಕಿ ಅಗತ್ಯ ಮೂಲಸೌಲಭ್ಯ ನೀಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಹಾಸ್ಟೆಲ್​ಗೆ ಬೀಗ ಹಾಕಿ ಆಕ್ರೋಶ

ಈ ಹಿಂದೆ ಇದ್ದ ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ನೇಮಕ ಮಾಡಬೇಕು. ಅದರಿಂದ ಅವರು ವಸತಿ ಮತ್ತು ಊಟಕ್ಕೆ ಸಂಭವಿಸಿದ ಕೆಲಸ ಮಾಡುತ್ತಾರೆ. ಆದರೆ, ವಿವಿಯ ಇನ್ನಿತರ ಅಧಿಕಾರಿಗಳಿಗೆ ವಹಿಸಿದರೇ ಅವರು ತಮ್ಮ ಕೆಲಸದ ಜೊತೆಗೆ ಈ ವಾರ್ಡನ್ ಕೆಲಸ ಮಾಡುವುದು ಕಷ್ಟಕರ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು, ಎಂ.ಎ ವಿದ್ಯಾರ್ಥಿಗಳಿಗೆ ಒಟ್ಟು 44 ರೂಮ್ ಇವೆ. ಅದರಲ್ಲಿ 308 ವಿದ್ಯಾರ್ಥಿಗಳು ಇರುವುದಾದ್ರೂ ಹೇಗೆ ಎಂದು ಪ್ರಶ್ನಿಸಿದರು. 308 ವಿದ್ಯಾರ್ಥಿಗಳಿಗೆ 12 ಶೌಚಾಲಯ, 12 ಸ್ನಾನದ ಕೊಠಡಿಗಳಿವೆ. ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿದರು.

ಅಡುಗೆ ಸಿಬ್ಬಂದಿ ಕೊರತೆ :

308 ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಇಬ್ಬರು ಅಡುಗೆ ಭಟ್ಟರು, 7 ಸಹಾಯಕರಿದ್ದಾರೆ. ಅಡುಗೆ ತಯಾರು ಮಾಡುವಲ್ಲಿ ಕಷ್ಟವಾಗುತ್ತೆ. 308 ವಿದ್ಯಾರ್ಥಿಗಳಲ್ಲಿ, ಬರೀ 100 ತಟ್ಟೆಗಳಿವೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

ಸಮಸ್ಯೆ ಬಗೆಹರಿಸುವ ಭರವಸೆ :

ಈ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಸಂತ ಕುಮಾರ್, ನಿಮ್ಮ ಸಮಸ್ಯೆಗಳನ್ನು ಕುಲಪತಿಗಳ ಮುಂದೆ ಇಡಲಾಗುವುದು. ಅವರ ತೀರ್ಮಾನ ನೀಡುತ್ತಾರೆ ಎಂದರು.

For All Latest Updates

TAGGED:

ABOUT THE AUTHOR

...view details