ಬಳ್ಳಾರಿ: ಗ್ರಾಮ ದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವ ಸುಸೂತ್ರವಾಗಿ ಜರುಗಿತು. ಈ ಸಂದರ್ಭದಲ್ಲಿ ನೆರೆದಿದ್ದ ಜನರು ಹೊರತುಪಡಿಸಿ ಸಚಿವ ಶ್ರೀರಾಮುಲು ಒಬ್ಬರೇ ಮಾಸ್ಕ್ ಧರಿಸಿದ್ದು ವಿಶೇಷವಾಗಿತ್ತು.
ಅದ್ಧೂರಿಯಾಗಿ ನಡೆದ ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ: ಜಾತ್ರೆಯಲ್ಲಿ ಕೋವಿಡ್ ನಿಯಮ ಮಾಯ - ಬಳ್ಳಾರಿ ಶ್ರೀಕನಕದುರ್ಗಮ್ಮ ದೇವಸ್ಥಾನ
ಬಳ್ಳಾರಿ ನಗರದಲ್ಲಿ ನಡೆದ ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವದ ವೇಳೆ ನೆರೆದಿದ್ದ ಭಕ್ತಾದಿಗಳು ಮಾಸ್ಕ್ ಧರಿಸದೆ ನಿರ್ಲಕ್ಷ್ಯತೋರಿದ್ದಾರೆ. ಆದರೆ ಸಚಿವ ಶ್ರೀರಾಮುಲು ಮಾತ್ರ ಮಾಸ್ಕ್ ಧರಿಸಿದ್ದು ವಿಶೇಷವಾಗಿತ್ತು.
![ಅದ್ಧೂರಿಯಾಗಿ ನಡೆದ ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ: ಜಾತ್ರೆಯಲ್ಲಿ ಕೋವಿಡ್ ನಿಯಮ ಮಾಯ ಶ್ರೀಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ](https://etvbharatimages.akamaized.net/etvbharat/prod-images/768-512-11125907-235-11125907-1616497725850.jpg)
ಶ್ರೀಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಅಳಿಯ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಸೇರಿದಂತೆ ಸಾವಿರಾರು ಜನರು ಈ ಸಿಡಿಬಂಡಿ ರಥೋತ್ಸವಕ್ಕೆ ಸಾಕ್ಷಿಯಾದರು.
ಶ್ರೀರಾಮುಲು ಸುತ್ತಮುತ್ತಲಿದ್ದ ಅಭಿಮಾನಿಗಳು ಮಾಸ್ಕ್ ಹಾಕಿರಲಿಲ್ಲ. ಸಚಿವ ಶ್ರೀರಾಮುಲು ಮಾತ್ರ ಮಾಸ್ಕ್ ಧರಸಿಸಿದ್ದು ವಿಶೇಷವಾಗಿತ್ತು.